ಕಾಂಗ್ರೆಸ್ ನಾಯಕರ ವಿರುದ್ಧ ನಾಲಿಗೆ ಹರಿಬಿಟ್ಟ ಕೆಎಸ್ ಈಶ್ವರಪ್ಪ..!
ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಡುವ ಭರದಲ್ಲಿ ಸಚಿವ ಕೆಎಸ್ ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.
ವಿಧಾನಸೌಧ ಆವರಣದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಈಶ್ವರಪ್ಪ ತಮ್ಮ ಹೆಸರನ್ನು ‘ಮೇರಾ ನಾಮ್ ಜೋಕರ್’ ಎಂದು ಬದಲಿಸಿಕೊಳ್ಳಬೇಕು ಎಂದ ವಿಪಕ್ಷ ನಾಯಕರಿಗೆ ಪ್ರತಿಕ್ರಿಯಿಸುವ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ಹೀಗೆ ಕುಡಕ…… ಹೇಳುತ್ತಾರೆಂದು ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದರು. ಡೈಲಾಗ್ ಹೊಡೆದ ಬಳಿಕ ಎಚ್ಚೆತ್ತುಕೊಂಡ ಈಶ್ವರಪ್ಪ ಇದನ್ನೇ ಮಾದ್ಯಮದಲ್ಲಿ ದೊಡ್ಡದು ಮಾಡಬೇಡಿ. ಈ ಮಾತನ್ನು ನಾನು ವಾಪಸ್ಸು ಪಡೆಯುತ್ತೇನೆಂದು ಹೇಳಿದ್ದಾರೆ.
ಕೆಎಸ್ ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿರುದ್ಧ ಮಂಡ್ಯ ಮದ್ದೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ. “ಸಂಸ್ಕೃತಿ, ಸಂಸ್ಕಾರ, ಜವಬ್ದಾರಿ ಇಲ್ಲದವರು ಇಂಥಹ ಪದಗಳನ್ನು ಬಳಸುತ್ತಾರೆ. ಅವರು ಬಂದ ದಾರಿ ಅಂಥದ್ದು. ಹೀಗಾಗಿ ಅವರಿಂದ ಒಳ್ಳೆದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸಚಿವರಾದವರಿಗೆ ಕೊಂಚ ಮಾತಿನ ಮೇಲೆ ಹಿಡಿತ ಇರಬೇಕು ಎಂದು ಗರಂ ಆದರು.
‘ನಾನು ಇಲಿನೋ.. ಇಲಿನೋ ಅದನ್ನು ಜನ ನಿರ್ಧಾರ ಮಾಡುತ್ತಾರೆ. ಈಶ್ವರಪ್ಪ ಅಲ್ಲ’ ಎಂದು ಟಾಂಗ್ ಕೊಟ್ಟಿದ್ದಾರೆ.
“ಈಶ್ವರಪ್ಪಗೆ ಹುಚ್ಚು ಹಿಡಿದಿರಬೇಕು. ಮನೆಯಲ್ಲಿ ಕೌಟಿಂಗ್ ಮಷೀನ್ ಇಟ್ಟುಕೊಂಡು ದೆಹಲಿಗೆ ಹೋದರೂ ಸಿಎಂ ಆಗಲಿಲ್ಲ. ಸಿಎಂ ಆಗುವ ಕನಸು ಕಂಡು ನಿರಾಸೆ ಆದ ಈಶ್ವರಪ್ಪಗೆ ಸಿಎಂ ಸ್ಥಾನ ಸಿಗದೇ ಹುಚ್ಚು ಹಿಡಿದಿದೆ. ಹೀಗಾಗಿ ಈಶ್ವರಪ್ಪ ಅವರಿಗೆ ದೇಶದಲ್ಲಿ ಪ್ರಶಿದ್ಧವಾದ ನಿಮಾನ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಚಿಕಿತ್ಸೆ ಕೊಡಿಸಲು ಮನವಿ ಮಾಡುತ್ತೇನೆ” ಎಂದು ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಕಿಡಿ ಕಾರಿದ್ದಾರೆ.
ಈ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, “ ನಾಲಿಗೆ ಅವರ ಆಚಾರ ತೋರಿಸುತ್ತೆ. ಅವರ ತಂದೆ- ತಾಯಿ ಇಂಥ ಸಂಸ್ಕೃತಿ ಕಲಿಸಿದ್ದಾರೆ. ಈ ರೀತಿ ಭಾಷೆ ಬಳಿಸೋರನ್ನ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಇದು ಬಿಜೆಪಿಗೆ ನಾಚಿಗೇಡಿನ ಸಂಗತಿ. ಬಿಜೆಪಿಗೆ ಇದು ಕಳಂಕ. ಪ್ರಚೋದನಕಾರಿ ಹೇಳಿಕೆ ಕೊಟ್ಟವರ ವಿರುದ್ಧ ಎಫ್ಐಆರ್ ದಾಖಲಾಗಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.