ಉತ್ತರಾಖಂಡ ಚುನಾವಣೆ: ಎಎಪಿಯಿಂದ ಮಾಜಿ ಸೈನಿಕ ಅಜಯ್ ಕೊತಿಯಾಲ್ ಸಿಎಂ ಅಭ್ಯರ್ಥಿ!
ಮುಂದಿನ ವರ್ಷ ಉತ್ತರಾಖಂಡ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳು ಭಾರೀ ಸಿದ್ದತೆಯಲ್ಲಿವೆ. ಈ ನಡುವೆ, ಮಾಜಿ ಸೈನಿಕ ಅಜಯ್ ಕೊತಿಯಾಲ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಮ್ ಆದ್ಮಿ ಪಾರ್ಟಿ ಘೋಷಿಸಿದೆ.
ಉತ್ತರಾಖಂಡಕ್ಕೆ ಭೇಟಿ ನೀಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ರಾಜ್ಯ ರಾಜಕಾರಣಿಗಳ ವರ್ತನೆಯಿಂದ ಬೇಸರಗೊಂಡಿರುವ ಜನರು ಬದಲಾವಣೆಗಾಗಿ ಕಾಯುತ್ತಿದ್ದಾರೆ. ಅವರ ಪಡೆದ ಪ್ರತಿಕ್ರಿಯೆಯನ್ನು ಆಧರಿಸಿ ಅಜಯ್ ಕೊತಿಯಾಲ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯವನ್ನು ಲೂಟಿ ಮಾಡುತ್ತಿರುವ ರಾಜಕಾರಣಿಗಳಿಂದ ಮುಕ್ತಿ ಪಡೆಯಲು ಇಲ್ಲಿನ ಜನರು ಬಯಸುತ್ತಾರೆ. ಅವರ ಬಯಕೆಯಂತೆ ಒಬ್ಬ ಸೇನಾಪತಿಯನ್ನು ಮುಖ್ಯಮಂತ್ರಿಯಾಗಿಸಿದ್ದೇವೆ. ಅವರು ತನ್ನ ಸಂಪೂರ್ಣ ಅಧಿಕಾರವನ್ನು ಜನರ ಸೇವೆಗಾಗಿ ಒತ್ತೆಯಿಡಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಕುಂಭಮೇಳ ನಡೆದ ಹರಿದ್ವಾರದಲ್ಲಿ ಕೊರೊನಾ ಪಾಸಿಟಿವ್ ದರ ಭಾರೀ ಇಳಿಕೆ; ಉತ್ತರಾಖಂಡ್ ಸರ್ಕಾರ ಮಾಡಿದ್ದೇನು?