ವಿವಾದಾತ್ಮಕ ನಿರ್ಧಾರಕ್ಕೆ ಕೈ ಹಾಕಿದ ಬಿಬಿಎಂಪಿ? : ಡಾ. ರಾಜ್, ವಿಷ್ಣು, ಶಂಕರ್ ನಾಗ್ ಪುತ್ಥಳಿಗಳಿಗೆ ಕುತ್ತು?

ನ್ಯಾಯಾಲಯದ ಆದೇಶದ ಮೇರೆಗೆ ಬೆಂಗಳೂರಿನಲ್ಲಿ ಅನಧಿಕೃತ ಪುತ್ಥಳಿಗಳ ತೆರವಿಗೆ ಬಿಬಿಎಂಪಿ ಮುಂದಾಗಿದೆ.

ಹೌದು… ನಗರದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಕನ್ನಡದ ಮೇರು ನಟರ ಪುತ್ಥಳಿಗಳ ತೆರವಿಗಾಗಿ ಪ್ಲ್ಯಾನ ಮಾಡಲಾಗಿದೆ. ಈ ಮೂಲಕ ಬಿಬಿಎಂಪಿ ವಿವಾದಾತ್ಮಕ ನಿರ್ಧಾರಕ್ಕೆ ಕೈ ಹಾಕಿದಂತಾಗಿದೆ. ನಗರದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಡಾ. ರಾಜಕುಮಾರ, ಡಾ. ವಿಷ್ಣುವರ್ಧನ, ಶಂಕರ್ ನಾಗ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳಿಗೆ ಕುತ್ತು ಬರುವ ಸಾಧ್ಯತೆ ಇದೆ. ಈಗಾಗಲೇ ಅನಧಿಕೃತ ಪುತ್ಥಳಿಗಳ ಪಟ್ಟಿಯನ್ನು ತಯಾರಿಸಿದ ಬಿಬಿಎಂಪಿ ಅವುಗಳ ತೆರವಿಗೆ ನಿರ್ಧರಿಸಿದೆ.

ಅಭಿಮಾನಿಗಳು, ಸಂಘಗಳು, ಸಿನಿ ಪ್ರೇಮಿಗಳು ತಮ್ಮ ನೆಚ್ಚಿನ ನಟರ ಮತ್ತು ವ್ಯಕ್ತಿಗಳ ಪುತ್ಥಳಿಗಳನ್ನ ನಿರ್ಮಾಣ ಮಾಡಿರುತ್ತಾರೆ. ಆದರೆ ಆ ಪುತ್ಥಳಿಗಳನ್ನು ತೆರವಿಗೆ ಬಿಬಿಎಂಪಿ ಮುಂದಾಗಿದೆ. ಆದರೆ ಅಂದುಕೊಂಡಷ್ಟು ಸುಲಭವಾಗಿ ಪುತ್ಥಳಿಗಳನ್ನು ತೆರವುಗೊಳಿಸುವುದು ಸಾಧ್ಯವಿಲ್ಲ. ಯಾಕೆಂದರೆ ಅಭಿಮಾನಿಗಳು ರಾತ್ರೋರಾತ್ರಿ ಪುತ್ಥಳಿಗಳನ್ನು ನಿರ್ಮಾಣ ಮಾಡಿಲ್ಲ. ಮಾಡುವ ಮುನ್ನ ತಡೆಯಬೇಕಾಗಿದ್ದ ಬಿಬಿಎಂಪಿ ಈಗ ಪುತ್ಥಳಿಗಳನ್ನು ತೆರವಿಗೆ ಮುಂದಾದರೆ ಅಭಿಮಾನಿಗಳು ಆಕ್ರೋಶಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಹೀಗಿದ್ದರೂ ಬಿಬಿಎಂಪಿಯಿಂದ ಒಪ್ಪಿಗೆ ಪಡೆಯದೇ ನಿರ್ಮಾಣವಾದ ಮಹಾನ್ ವ್ಯಕ್ತಿಗಳ ಪುತ್ಥಳಿಗಳ ತೆರವಿಗೆ ಬಿಬಿಎಂಪಿ ಪ್ಲ್ಯಾನ್ ಮಾಡಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights