ಫ್ಯಾಕ್ಟ್ಚೆಕ್: ಯೋಗಿ ಆದಿತ್ಯನಾಥ್ ತನ್ನ ಹಣೆಗೆ ಇಟ್ಟುಕೊಂಡ ತಿಲಕ ಹೋಲಿಕಾ ದಹನದ್ದು ಹೊರತು ಹುತಾತ್ಮ ಸೈನಿಕನ ಚಿತಾಭಸ್ಮವಲ್ಲ
ಇತ್ತೀಚೆಗೆ ಹುತಾತ್ಮರಾದ ಉತ್ತರ ಪ್ರದೇಶದ ಯೋಧನ ಚಿತಾಭಸ್ಮವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಹಣೆಗೆ ಹಚ್ಚಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. “ಹುತಾತ್ಮ ಯೋಧನ ಸುಟ್ಟು ಬೂದಿಯನ್ನು ಹಣೆಗೆ ತಿಲಕವಿಟ್ಟು ಗೌರವ ಸೂಚಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್” ಎನ್ನುವ ಪೋಸ್ಟ್ಗಳು ವಿಡಿಯೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ
ಈ ಪೋಸ್ಟ್ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್:
ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ವೀಡಿಯೊದ ಸ್ಕ್ರೀನ್ ಶಾಟ್ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್ನಲ್ಲಿರುವ ವೀಡಿಯೊವನ್ನು ಹೋಲುವಂತಹ ಹಲವು ವಿಡಿಯೋಗಳು ಕಂಡುಬಂದಿವೆ. ಭಗವಾ ಕ್ರಾಂತಿ ಸೇನಾ ಅಧ್ಯಕ್ಷ ಪ್ರಾಚಿ ಸಾಧ್ವಿ ಅವರು 22 ಮಾರ್ಚ್ 2022 ರಂದು ಮಾಡಿರುವ ಟ್ವೀಟ್ ನಲ್ಲಿ ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಹೋಳಿ ಹಬ್ಬದ ಸಾಂಪ್ರದಾಯಿಕ ಆಚರಣೆಯ ಭಾಗವಾಗಿ ತನ್ನ ಹಣೆಯ ಮೇಲೆ ಹೋಲಿಕಾದಹನದ ತಿಲಕವನ್ನು ಹಚ್ಚಿಕೊಂಡಿದ್ದಾರೆ. ಇದೇ ರೀತಿಯ ವಿವರಣೆಯೊಂದಿಗೆ ಇತರ ಕೆಲವು ಸ್ಥಳೀಯ ಸುದ್ದಿ ವಾಹಿನಿಗಳು ವೀಡಿಯೊವನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಕಾಣಬಹುದು.
हमारे सनातन की परंम्परा है होलिका की राख ठंढी होने के बाद उसे माथे पे लगाते हैं 🙏🚩 @myogiadityanath जी pic.twitter.com/G8gldCeTHl
— Sadhvi Prachi (मोदी का परिवार) (@Sadhvi_prachi) March 22, 2022
ಉತ್ತರ ಪ್ರದೇಶ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಯೋಗಿ ಆದಿತ್ಯನಾಥ್ ಗೋರಖ್ಪುರ ಗೋರಕ್ಷಾಪೀಠದಲ್ಲಿ ಜನರೊಂದಿಗೆ ಹೋಳಿ ಆಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದಾಗ್ಯೂ, ಗೋರಖನಾಥ ದೇವಾಲಯವು ಹೋಳಿ ದಹನದ ನಂತರ ಚಿತಾಭಸ್ಮವನ್ನು ತಿಲಕದಿಂದ ಅಭಿಷೇಕಿಸಿ ಹೋಳಿ ಆಚರಣೆಯನ್ನು ಪ್ರಾರಂಭಿಸುವ ಪದ್ದತಿ ಇಂದಿಗೂ ರೂಡಿಯಲ್ಲಿದೆ. 1996 ರಿಂದ 2019 ರವರೆಗೆ ಗೋರಖ್ಪುರ ಗೋರಖ್ಪುರದ ಗೋರಕ್ಷಾ ಪೀಠದ ಪೀಠಾಧಿಪತಿಯಾಗಿ ಸೇವೆ ಸಲ್ಲಿಸಿದ ಯೋಗಿ ಆದಿತ್ಯನಾಥ್ ಅವರು ಹಲವು ವರ್ಷಗಳಿಂದ ಈ ಆಚರಣೆಯನ್ನು ಅನುಸರಿಸುತ್ತಾ ಬಂದಿದ್ದಾರೆ.
ಗೋರಖ್ಪುರ ಗೋರಕ್ಷಾಪೀಠದಲ್ಲಿ ಯೋಗಿ ಆದಿತ್ಯನಾಥ್ ಹೋಳಿ ಆಚರಿಸುತ್ತಿರುವ ದೃಶ್ಯಗಳನ್ನು ಇಲ್ಲಿ , ಇಲ್ಲಿ ನೋಡಬಹುದು. ಈ ವಿವರಗಳನ್ನು ಆಧರಿಸಿ, ಪೋಸ್ಟ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಯೋಗಿ ಆದಿತ್ಯನಾಥ್ ಅವರ ಹಣೆಯ ಮೇಲೆ ತಿಲಕ ಇಟ್ಟುಕೊಂಡಿದ್ದ ಹೋಳಿಕಾ ದಹನದ್ದೆ ಹೊರತು ದೇಶದ ಹುತಾತ್ಮ ಸೈನಿಕನ ಚಿತಾಭಸ್ಮವಲ್ಲ ಎಂದು ಖಚಿತವಾಗಿ ಹೇಳಬಹುದು.
ಒಟ್ಟಾರೆಯಾಗಿ ಹೇಳುವದಾದರೆ ಯೋಗಿ ಆದಿತ್ಯನಾಥ್ ಅವರು ಹೋಳಿ ಆಚರಣೆಯ ಸಂದರ್ಭದಲ್ಲಿ ದೇಗುಲದ ಹೋಳಿಕಾಳ ಚಿತಾಭಸ್ಮ ತಿಲಕವನ್ನು ಹಣೆಗೆ ಇಟ್ಟುಕೊಂಡ ದೃಶ್ಯಗಳನ್ನು ತಿರುಚಿ ಸೈನಿಕನ ಚಿತಾಭಸ್ಮದ ದೃಶ್ಯಗಳೆಂಬಂತೆ ತಪ್ಪಾಗಿ ಹಂಚಿಕೊಂಡಿದ್ದಾರೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಹಳೆಯ ವಿಡಿಯೊದೊಂದಿಗೆ ಮುಸ್ಲಿಂ ದ್ವೇಷ ಹರಡುತ್ತಿರುವ ಬಲಪಂಥೀಯ ಪ್ರತಿಪಾದಕರು!!