ಪ್ರೀತಿಸಿ ವಿವಾಹ : ಮದ್ವೆ ದ್ವೇಷದಿಂದ 20 ಎಕರೆ ಅಡಿಕೆ ಗಿಡ ನಾಶ…!
ಪ್ರೀತಿಸಿ ಮದ್ವೆಯಾದ ದ್ವೇಷಕ್ಕೆ ಹುಡುಗಿ ಮನೆಯವರು ಹುಡುಗನ 20 ಎಕರೆ ಅಡಿಕೆ ತೋಟವನ್ನೇ ನಾಶ ಮಾಡಿದ ಘಟನೆ ತುಮಕೂರು ತಾಲೂಕಿನ ಮಲ್ಲಸಂದ್ರಪಾಳ್ಯೆದಲ್ಲಿ ನಡೆದಿದೆ.
ಹೌದು… ಅನು ಮತ್ತು ರವಿಚಂದ್ರ ವಿವಾಹಿತರು. ಇವರದ್ದು ಒಂದೇ ಜಾತಿ ಜನಾಂಗ ಒಂದೇ ಸಮುದಾಯ ಆದರೂ ಇವರ ಮನೆಯಿಂದ ಮದ್ವೆಗೆ ವಿರೋಧ ವ್ಯಕ್ತವಾಗಿತ್ತು. ಅನುಗೆ ಬೇರೆ ಮದ್ವೆ ಮಾಡಲು ನಿರ್ಧಾರ ಮಾಡಲಾಗಿತ್ತು. ಬೇರೆ ಹುಡುಗನೊಂದಿಗೆ ಹೆದರಿಸಿ ಬೆದರಿಸಿ ನಿಶ್ಚಿತಾರ್ಥ ಕೂಡ ಮಾಡಲಾಗಿತ್ತು. ಒಂದುವೇಳೆ ಮದುವೆ ಮಾಡಿಕೊಳ್ಳದೇ ಹೋದಲ್ಲಿ ಅನು ತಾಯಿ ತಾನು ವಿಷ ಸೇವಿಸುವುದಾಗಿ ಹೆದರಿಸಿದ್ದಳಂತೆ. ಹೀಗಾಗಿ ಅನು ತನ್ನ ಪ್ರಿಯತಮನೊಂದಿಗೆ ಮದುವೆ ಆಗಿದ್ದಾಳೆ.
ಇದಕ್ಕೆ ಕೋಪಗೊಂಡ ಪೋಷಕರು ಹುಡುಗನ ಅಡಿಕೆ ತೋಟವನ್ನೇ ನಾಶ ಮಾಡಿದ್ದಾರೆ. ಈ ಬಗ್ಗೆ ದಂಪತಿಗಳು ಠಾಣೆ ಮೆಟ್ಟಿಲೇರಿದ್ದಾರೆ. 2 ದಿನಗಳ ಹಿಂದೆ ಅನು ರವಿಚಂದ್ರ ಇಬ್ಬರು ಮದುವೆಯಾಗಿದ್ದರು. ಇದರಿಂದ ಕೋಪಗೊಂಡ ಅನು ಪೋಷಕರು ರಾತ್ರೋ ರಾತ್ರಿ ಇನ್ನೊಂದು ವರ್ಷದಲ್ಲಿ ಫಸಲು ಬಿಡುವ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಅಡಿಕೆ ತೋಟ ಬೆಳೆಸಲು ರವಿ ಮನೆಯವರು ನೆಮ್ಮದಿಯಾಗಿ ನಿದ್ದೆ ಮಾಡಿಲ್ಲ . ರಾತ್ರೋರಾತ್ರಿ ನೀರು ಬಿಟ್ಟು ಕಷ್ಟಪಟ್ಟು ಬೆಳಸಿದ್ದರು. ಆದರೀಗ 20ಎಕರೆ ಅಡಿಕೆ ತೋಟ ನೆಲಸಮ ಮಾಡಲಾಗಿದೆ.
ಅನು ಪೋಷರ ನಡೆಯನ್ನು ಪ್ರಶ್ನಿಸಿ ರವಿಚಂದ್ರ ಮತ್ತು ಅನು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.