ಮಲೆನಾಡಲ್ಲಿ ಮುಂದುವರೆದ ಮಳೆ ಅಬ್ಬರ : ಕಾಫಿ ತೋಟದಲ್ಲಿ ಭೂ ಕುಸಿತ
ಮಲೆನಾಡಲ್ಲಿ ಮುಂದುವರೆದ ಮಳೆ ಅಬ್ಬರಕ್ಕೆ ಕಾಫಿ ತೋಟದಲ್ಲಿ ಭೂ ಕುಸಿತ ಉಂಟಾದ ಘಟನೆ ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದಲ್ಲಿ ನಡೆದಿದೆ.
30 ಅಡಿ ಆಳಕೆ ಭೂಮಿ ಕುಸಿದಿದೆ. ಇದರಿಂದ ಒಂದು ಎಕರೆ ಪ್ರದೇಶದ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಕುಸಿದಲ್ಲೇ ಭೂಮಿ ಕುಸೀತ್ತಿರುವುದರಿಂದ ತೋಟದ ಸ್ಥಿತಿ ಕಂಡು ಕಾಫಿ ತೋಟ ಮಾಲೀಕ ಸುಧೀರ್ ಆತಂಕಗೊಂಡಿದ್ದಾರೆ. ಕುಸಿದ ಮಣ್ಣು ಮುಂದೆ ಹೋಗ್ತಿಲ್ಲ, ಪಾತಾಳಕ್ಕೆ ಸೇರುತ್ತಿದೆ ಮಣ್ಣು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದುವರೆದ ಮಳೆಯಿಂದ ಮಲೆನಾಡಿಗರಲ್ಲಿ ಹೆಚ್ಚಿದ ಆತಂಕದ ಜೊತೆಗೆ ಗುಡ್ಡ, ಭೂಮಿ ಕುಸಿಯುತ್ತಲೇ ಇವೆ.