ಕಲುಷಿತ ನೀರು ಸೇವನೆ : ಯಾದಗಿರಿಯ 200ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥ…!

ಕಲುಷಿತ ನೀರು ಸೇವನೆ 200ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥಗೊಂಡ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿಯ ಸುರಪುರ ತಾಲೂಕು ಮಾಚಗುಂಡಾಳ್ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಕಲುಷಿತ ನೀರು ಸೇವಿಸಿ 200ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ಮಕ್ಕಳು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಕಳಾಗುತ್ತಿದ್ದಾರೆ. ಏಕಾಏಕಿ ಸರ್ಕಾರಿ ಆಸ್ಪತ್ರೆಗೆ ಜನ ದಾಖಲಾಗುತ್ತಿರುವುದರಿಂದ ಅನುಮಾನ ಬಂದು ವೈದ್ಯರು ಗ್ರಾಮ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕಲುಷಿತ ನೀರು ಮಿಶ್ರವಾದ ಬಗ್ಗೆ ಮಾಹಿತಿ ಸಿಕ್ಕಿದೆ.

ತೆರದ ಬಾವಿಯಿಂದ ಟ್ಯಾಂಕ್ಗೆ ನೀರನ್ನು ರವಾನಿಸಿ ಬಳಿಕ ಮಾಚಗುಂಡಾಳ್ ಗ್ರಾಮಕ್ಕೆ ನೀರು ಬಿಡಲಾಗುತ್ತದೆ. ಟ್ಯಾಂಕ್ ನಿಂದ ಗ್ರಾಮಕ್ಕೆ ನೀರು ಬಿಡುವ ಮಾರ್ಗದಲ್ಲಿ ಪೈಪ್ ಒಡೆದು ಕಲುಷಿತ ನೀರು ಮಿಶ್ರವಾಗಿರುವ ಶಂಕೆ ವ್ಯಕ್ತವಾಗಿದೆ.

ಮೂರು ನಾಲ್ಕು ದಿನಗಳಿಂದ ಹೆಚ್ಚೆಚ್ಚು ಜನ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಬೆಡ್ ಗಳು ಸಾಕಾಗುತ್ತಿಲ್ಲ. ಹೀಗಾಗಿ ದಾಖಲಾತಿ ಬಗ್ಗೆ ವೈದ್ಯಾಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights