ಅಧಿಕಾರ ದುರ್ಬಳಕೆ ಮಾಡುತ್ತಿದೆ ರಾಜ್ಯದ ಬಿಜೆಪಿ: ಡಿಕೆಶಿ
ರಾಜ್ಯದ ಬಿಜೆಪಿ ಸರ್ಕಾರವು ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನಮ್ಮದೇ ಆದ ರಾಜಕೀಯ ಕಾರ್ಯಕರ್ತವನ್ನು ಹೊಂದಿದೆ. ಪರಿಸ್ಥಿತಿಗಳನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕೆಂಬ ಅರಿವು ನಮಗಿದೆ. ಬಿಜೆಪಿ ಶಾಸಕರ ಅಪಹರಣ ತಂತ್ರವನ್ನು ಮೈಗೂಡಿಸಿಕೊಂಡಿದೆ. ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಹೊತ್ತು ತಂದು ಬೆಂಗಳೂರಿನಲ್ಲಿ ಕೂಡಿಹಾಕಲಾಗಿದೆ. ಅವರ ಭೇಟಿಗಾಗಿ ದಿಗ್ವಿಜಯ್ ಸಿಂಗ್ ಹೋರಾಟ ಮಾಡುತ್ತಿದ್ದಾರೆ. ದಿಗ್ವಿಜಯ್ ಸಿಂಗ್ ಒಬ್ಬರೇ ಇಲ್ಲ, ಅವರೊಂದಿಗೆ ನಾನೂ ಇದ್ದೇನೆ. ಅವರಿಗೆ ಹೇಗೆ ಬೆಂಬಲ ನೀಡಬೇಕು ಎಂದು ತಿಳಿದಿದೆ. ಆದರೆ, ಕರ್ನಾಟಕದ ಕಾನೂನು ಸುವ್ಯವಸ್ಥೆಯನ್ನು ಅವ್ಯವಸ್ಥೆಗೊಳಿಸಲು ನಾನು ಬಯಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಧ್ಯಪ್ರದೇಶದ 21 ಶಾಸಕರು ಠಿಕಾಣಿ ಹೂಡಿರುವ ಬೆಂಗಳೂರಿನ ರಮಾಡ್ ಹೋಟೆಲ್ ಬಳಿ ಶಾಸಕರ ಭೇಟಿಗಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇಂದು ಬೆಳಗ್ಗೆ ಧರಣಿ ಕುಳಿತಿದ್ದರು. ಅವರನ್ನು ಪೊಲೀಸರು ಬಂಧಿಸಿ ಅಮೃತಹಳ್ಳಿ ಠಾಣೆಗೆ ಕರೆದೋಯ್ದಿದ್ದಾರೆ. ದಿಗ್ವಿಜಯ್ ಸಿಂಗ್ ಅಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದ್ದಾರೆ.