ಅವತ್ತು ಹೌದೊ ಹುಲಿಯಾ. ಇವತ್ತು ಹೌದೊ ರಾಜಾಹುಲಿ : ಪಕ್ಷ ಚೇಂಜ್ ಮಾಡಿದ ಹೌದು ಹುಲಿಯಾ
ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಪ್ರಚಾರದ ವೇಳೆ ಉಗಾರ ಗ್ರಾಮದಲ್ಲಿ ಓರ್ವ ವ್ಯಕ್ತಿ ಕುಡಿದ ಅಮಲಿನಲ್ಲಿ ಹೌದು ಹುಲಿಯಾ ಎನ್ನುವ ಮೂಲಕ ಸಾಕಷ್ಟು ಸುದ್ದಿ ಆಗಿತ್ತು. ಹೌದು ಹುಲಿಯಾ ಎಂದಿದ್ದ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು.
ನೆಟ್ಟಿಗರಂತ್ತು ಹಲವಾರು ವಿಡಿಯೋ ತುಣುಕುಗಳಿಕೆ ಹೌದು ಹುಲಿಯಾ ಅಂದಿದ್ದನ್ನೆ ಜೋಡಿಸಿ ಟ್ರೋಲ ಕೂಡ ಮಾಡಿದ್ರು. ಆದ್ರೆ ಈಗ ಚುನಾವಣಾ ಫಲಿತಾಂಶ ಹೋರ ಬೀಳುತ್ತಲೆ ಹೌದು ಹುಲಿಯಾ ಅಂದವ ಈಗ ಹೌದು ರಾಜಾಹುಲಿ ಅನ್ನ ತೊಡಗಿದ್ದಾನೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಪೀರಪ್ಪ ಕಟ್ಟಿಮನಿ ಬಿಜೆಪಿ ಸೇರ್ಪಡೆ ಆಗಿದ್ದಾನೆ ಮೊದಲಿನಿಂದಲೂ ಸಿದ್ದರಾಮಯ್ಯ ಅಭಿಮಾನಿಗಿದ್ದ ಪೀರಪ್ಪ ಸಿದ್ದರಾಮಯ್ಯ ಭಾಷಣಕ್ಕೆ ಖುಷಿಯಾಗಿ ಹೌದು ಹುಲಿಯಾ ಎಂದಿದ್ದ ಆದ್ರೆ ಇದೀಗ ಅದೆ ಪೀರಪ್ಪ ಬಿಜೆಪಿಗೆ ಬಂದು ಬಿಜೆಪಿ ಮತ್ತು ಯಡಿಯೂರಪ್ಪನ್ನ ಹೌದು ರಾಜಾಹುಲಿ ಅನ್ನ ತೋಡಗಿದ್ದಾನೆ ಬಿಜೆಪಿ ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಗೆಲ್ಲುತ್ತಿದ್ದಂತೆ ಕೊರಳಲ್ಲಿ ಬಿಜೆಪಿ ಶಾಲು ಗುಲಾಲ ಹಚ್ಚಿಕೊಂಡು ಹೌದು ರಾಜಾಹುಲಿ ಅನ್ನುವ ವಿಡಿಯೋ ಈಗ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ ಅಂದು ಹುಲಿಯಾ ಅಂದವ ಈಗ ರಾಜಾಹುಲಿ ಆದಾ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.