ಆಹಾರ ಅರಸಿ ಗ್ರಾಮಕ್ಕೆ ಬಂದು ”ಏಯ್ ಹುಲಿಯಾ…” ಅನ್ನುತ್ತಿದ್ದಂತೆ ಓಡಿ ಹೋದ ಚಿರತೆ…!

ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ ಚಿರತೆಗೆ ಹುಲಿಯನ ಭಯ ಆಗಿದೆ. ಏನಿದು ಹೀಗೆ ಅನ್ಕೊಳ್ಬೇಡಿ. ಕೇಳೋಕೆ ತಮಾಷೆ ಅನ್ಸಿದ್ರು ನಿಜಾನೇ.

ನಡು ರಾತ್ರಿ ಚಿಕ್ಕಮಗಳೂರು ತರೀಕೆರೆ ತಾಲ್ಲೂಕಿನ ಎ ರಂಗಾಪುರ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ ” ಏಯ್ ಹುಲಿಯಾ…” ಅನ್ನುತ್ತಿದ್ದಂತೆ ಓಡಿ ಹೋದ ಘಟನೆ ನಡೆದಿದೆ.

ಚಿರತೆಯನ್ನು ಕಂಡು ಏಯ್ ಹುಲಿಯ ಎಂದು ಬೆದರಿಸಿದ ಮನೆಯವರ ಕೂಗಾಟಕ್ಕೆ ಅಲ್ಲಿಂದ ಕಾಲ್ಕಿತ್ತಿದೆ ಚಿರತೆ. ಚಿರತೆ ಹೋಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಕಳೆದ ಹಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಓಡಾಡುತ್ತಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights