ಒಳ ರಾಜಕೀಯಕ್ಕೆ ಬಲಿಯಾಯ್ತು ದತ್ತಾತ್ರೇಯ ವಿಗ್ರಹ : ಯಾರಿಗೂ ಬೇಡವಾದ ಮೂರ್ತಿ
ಒಳ ರಾಜಕೀಯಕ್ಕೆ ದತ್ತಾತ್ರೇಯ ವಿಗ್ರಹ ಬಲಿಯಾದ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ದೇವನೂರಿನಲ್ಲಿ ನಡೆದಿದೆ.
ಹೌದು… ದತ್ತಮಾಲೆ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪೂಜಿಸಲು ತಂದಿದ್ದ ವಿಗ್ರಹ ಯಾರಿಗೂ ಬೇಡವಾಗಿ ಪೊಲೀಸ್ ವಶದಲ್ಲಿತ್ತು. ಸದ್ಯ ದತ್ತ ವಿಗ್ರಹವನ್ನು ದೇವನೂರು ಬಳಿಯ ಕಾಳಿ ಮಠಕ್ಕೆ ರವಾನೆ ಮಾಡಲಾಗಿದೆ.
ಒಲ್ಲದ ಮನಸ್ಸಿನಿಂದಲೇ ಸಿಬ್ಬಂದಿಗಳು ಮಠದಲ್ಲಿ ವಿಗ್ರಹವನ್ನು ಇರಿಸಿಕೊಂಡಿದ್ದಾರೆ. ಇದರಿಂದ ಶಾಸಕ ಸಿಟಿ ರವಿ ವಿರುದ್ಧ ಹಿಂದೂಪರ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದತ್ತಮಾಲೆ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪೂಜಿಸಲು ತಂದಿದ್ದ ವಿಗ್ರಹವನ್ನು ರಾಜಕೀಯ ಒತ್ತಡಕ್ಕೆ ಮಣಿದ ಪೊಲೀಸರು ಮೆರವಣಿಗೆಯಲ್ಲಿ ಪೂಜಿಸಲು ಬಿಡದೆ ಎತ್ತಂಗಡಿ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಾಯಕ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾರವಾರ ದಿಂದ ತಂದಿದ್ದ ದತ್ತಮೂರ್ತಿಯನ್ನು ಶ್ರೀರಾಮಸೇನೆ ಕಾರ್ಯಕರ್ತ ನೀಡಿದ್ದರು. ಆದರೆ ಶೋಭಯಾತ್ರೆ ವೇಳೆ ಪೊಲೀಸರು ಮೂರ್ತಿ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ರು.
ಈ ವೇಳೆ ಪೊಲೀಸರ ವಿರುದ್ಧ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ಕೂಡ ಮಾಡಿದ್ದಾರೆ. ಇದು ರಾಜಕೀಯಕ್ಕೆ ಒತ್ತಡಕ್ಕೆ ಮಣಿದು ಮೂರ್ತಿ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.