ಕುದುರೆ ಮರಿ ಮೇಲೆ ಶ್ವಾನಗಳ ದಾಳಿ : ಮರಿ ಕಳೆದುಕೊಂಡ ತಾಯಿ ಮೂಕ ರೋದನೆ..

ಕುದುರೆ ಮರಿ ಮೇಲೆ ಶ್ವಾನಗಳು ದಾಳಿ ನಡೆಸಿದ ಕರುಳಾಜನಕ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ನಡೆದಿದೆ.

ಟಬು ಎಂಬುವರು ಸಾಕಿದ್ದ ಕುದುರೆಯ ಮರಿಯನ್ನು ಎಳೆದು ತಂದ ಶ್ವಾನಗಳ ಹಿಂಡು ಕಚ್ಚಿ ಸಾಯಿಸಿವೆ. ರಾತ್ರಿ ಕುದುರೆ ಕಟ್ಟಿ ಹಾಕಿದ್ದಾಗ ತಾಯಿ ಕುದುರೆ ಪಕ್ಕದಲ್ಲಿದ್ದ ಕುದುರೆ ಮರಿಯನ್ನು‌ ಶ್ವಾನಗಳ ಹಿಂಡು ಎಳೆದು ತಂದಿವೆ. ಶ್ವಾನಗಳ ದಾಳಿಯಿಂದ ಕುದುರೆ ಮರಿ ಸ್ಥಳದಲ್ಲೇ ಮೃತಪಟ್ಟಿದೆ.

ಮೃತ ಕುದುರೆ ಮರಿ ಕಳೇಬರದ ಬಳಿ ತಾಯಿ ಕುದುರೆ ಮೂಕ ರೋದನೆ ಪಡ್ತಿರೋದನ್ನ  ನೋಡಿ ಜನ ಮರುಕ ವ್ಯಕ್ತಪಡಿಸಿದ್ದಾರೆ. ಮರಿಯನ್ನು ಕಚ್ಚಿ ಸಾಯಿಸಿದ ಶ್ವಾನಗಳನ್ನು ಅಟ್ಟಾಟಿಸಿ ಓಡಿಸಿ ಕಳೇಬರ ಕಾಯ್ತಿರೋ ತಾಯಿ ಕುದುರೆಯ ಮಾತೃ ಹೃದಯ ಕಂಡು ಸಾರ್ವಜನಿಕರು ಕಣ್ಣೀರಿಟ್ಟಿದ್ದಾರೆ.

ಮೃತ ಮರಿ ಕುದುರೆಯ ಕಳೇಬರದ ಬಳಿ ಯಾರಿಗೂ ಹತ್ತಿರ ಸೇರಿಸದ ತಾಯಿ ಕುದುರೆಯ ಕಂಡು ಸಾಕಿದವರು ಕೂಡ ಮರುಕ ವ್ಯಕ್ತಪಡಿಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights