ಕೃಷ್ಣಾ ಬಿಡ್ಜ್ ಬಳಿ ರೈತರ ಪ್ರತಿಭಟನೆ : ಆರ್ ಟಿಪಿಎಸ್ ಅಧಿಕಾರಿಗೆ ವಡಗೇರಾ ತಹಶೀಲ್ದಾರ್ ಕ್ಲಾಸ್..!
ಆರ್ ಟಿಪಿಎಸ್ ಅಧಿಕಾರಿಗೆ ವಡಗೇರಾ ತಹಶೀಲ್ದಾರ್ ಕ್ಲಾಸ್ ತೆಗೆದುಕೊಂಡ ಘಟನೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.
ಶಿವಪುರ ಗ್ರಾಮದ ಕೃಷ್ಣಾ ಬಿಡ್ಜ್ ಬಳಿ ರೈತರು ನಡೆಸುತ್ತಿರುವ ಪ್ರತಿಭಟನೆ ಸ್ಥಳದಲ್ಲಿಯೇ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಬ್ರಿಡ್ಜ್ ಹಿನ್ನೀರಿನಿಂದ ಜಲಾವೃತಗೊಂಡ ಶಿವಪುರ, ಗುಂಡ್ಲೂರು, ಗೋನಾಲ ಗ್ರಾಮದ ರೈತರ ಜಮೀನು ಆರ್ ಟಿ ಪಿಎಸ್ ನಿರ್ಮಿಸಿರುವ ಬ್ರಿಡ್ಜ್ ನಿಂದಾಗಿ ಜಲಾವೃತಗೊಂಡಿವೆ. ಇದರ ಪರಿಹಾರಕ್ಕೆ ಆಗ್ರಹಿಸಿ ರೈತರು ಕಳೆದ ಮೂರು ದಿನಗಳಿಂದ ಬ್ರಿಡ್ಜ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ನಿರತ ರೈತರ ಮನ ವೊಲಿಸಲು ಆಗಮಿಸಿದ್ದ ಆರ್ ಟಿಪಿಎಸ್ ಅಧಿಕಾರಿ ರಾಜು ಮುಡಿಗೆ ಇದೇ ವೇಳೆ ಸ್ಥಳಕ್ಕೆ ಬಂದಿದ್ದ ವಡಗೇರಾ ತಹಶೀಲ್ದಾರ್ ಸಂತೋಷಿ ರಾಣಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ನೀವು ಯಾಕೆ ಬಂದಿದ್ರಿ ಎಂದು ತರಾಟೆ ತೆಗೆದುಕೊಂಡ ತಹಶಿಲ್ದಾರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿದಕ್ಕೆ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗಿದೆ. ತಹಶಿಲ್ದಾರ ಜೊತೆ ಪ್ರತಿಭಟನೆ ನಿರತ ರೈತರು ಕೂಡ ಅಧಿಕಾರಿಯೊಂದಿಗೆ ವಾಗ್ವಾದ ಮಾಡಿದರು.