ಕೊನೆಗೂ ಸಿಕ್ತು ನ್ಯಾಯ : ಜ.22ಕ್ಕೆ ನಿರ್ಭಯಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ…!
ಕೊನೆಗೂ ನಿರ್ಭಯಾ ಪ್ರಕರಣಕ್ಕೆ ನ್ಯಾಯ ಸಿಕ್ಕಿದೆ. ನಿರ್ಭಯಾ ಪ್ರಕರಣದ ನಾಲ್ಕು ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ಡೆತ್ ವಾರೆಂಟ್ ನೀಡಲಾಗಿದೆ.
ಜನವರಿ 22 ಬೆಳಿಗ್ಗೆ 7 ಗಂಟೆಗೆ ನಾಲ್ಕು ಜನ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಡೆತ್ ವಾರೆಂಟ್ ಜಾರಿಯಾಗಿದೆ. ಸತತ 7 ವರ್ಷಗಳ ಬಳಿಕ ನಿರ್ಭಯಾ ಪ್ರಕರಣಕ್ಕೆ ನ್ಯಾಯ ಸಿಕ್ಕಿದೆ.
2012 ಡಿ. 12 ರಂದು ನಿರ್ಭಯಾ ಸಂತ್ರಸ್ತೆಯ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿತ್ತು. ಅತ್ಯಾಚಾರದ ಅಪರಾಧಿಗಳಾಗಿ ಅಕ್ಷಯ್, ಮುಖೇಶ್, ಪವನ್, ವಿನಯ್ ಬಂಧಿಸಲಾಗಿತ್ತು. ಇವರಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ದೇಶಾದ್ಯಂತ ಹೋರಾಟಗಳನ್ನು ಮಾಡಲಾಗಿತ್ತು.
ಇಂದು ನರ ರಾಕ್ಷಕರಿಗೆ ಗಲ್ಲು ಶಿಕ್ಷೆಗೆ ಡೆತ್ ವಾರೆಂಟ್ ಜಾರಿಗೊಳಿಸಲಾಗಿದೆ. ಇದರ ಬಗ್ಗೆ ನಿರ್ಭಯಾ ತಾಯಿ ಸಂತಸ ವ್ಯಕ್ತಪಡಿಸಿ ‘ಇದು ಭಾರತದ ಮಹಿಳೆಯರಿಗೆ ಸಂದ ಜಯ’ ಎಂದಿದ್ದಾರೆ. ಕೋರ್ಟ್ ತೀರ್ಪು ಇಡೀ ಭಾರತ ದೇಶದ ಗೆಲವು ಎಂದು ನಿರ್ಭಯಾ ತಾಯಿ ತಿಳಿಸಿದ್ದಾರೆ.