ಕೊಳೆಯುತ್ತಿದೆ ಪ್ರವಾಹ ಸಂತ್ರಸ್ಥರಿಗೆ ನೀಡಿದ ಪರಿಹಾರ ಸಾಮಗ್ರಿ….!

ಪ್ರವಾಹ ಸಂತ್ರಸ್ಥರ ಕೈಗೆ ತಲುಪದ ಪರಿಹಾರ ಸಾಮಗ್ರಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಕೊಳೆಯುತ್ತಿರುವುದು ಬಹಿರಂಗಗೊಂಡಿದೆ.

ಪ್ರವಾಹ ಸಂತ್ರಸ್ಥರಿಗೆ ನೀಡಿದ ಪರಿಹಾರ ಸಾಮಗ್ರಿ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಜನ ಸಂಪರ್ಕ ಕಚೇರಿಯಲ್ಲಿ ಪತ್ತೆಯಾಗಿದೆ.ಕಳೆದ ನಾಲ್ಕು ತಿಂಗಳ ಹಿಂದೆ ತುಂಗಭದ್ರಾ ನದಿಯಲ್ಲಿ ಪ್ರವಾಹದಿಂದ ಹೊನ್ನಾಳಿ ಪಟ್ಟಣ, ಹೊನ್ನಾಳಿ ತಾಲೂಕಿನ ಕೆಲ ಹಳ್ಳಿಗಳ ಜನ ಸಂತ್ರಸ್ಥರಾಗಿದ್ದರು.

ಈ ಸಂತ್ರಸ್ಥರಿಗಾಗಿ ಸಾರ್ವಜನಿಕರು ನೀಡಿದ್ದ ಪರಿಹಾರ ಸಾಮಗ್ರಿ ನೀಡಿದ್ದರು. ಮೂಟೆಗಳಲ್ಲಿ ತುಂಬಿದ ಸಾಮಗ್ರಿ ಸಂಪರ್ಕ ಕಚೇರಿಯಲ್ಲಿ ಸಂಗ್ರಹವಾಗಿದೆ. ಆದರೆ ಆಹಾರ ಸಾಮಾಗ್ರಿಗಳನ್ನ ಯಾರಿಗೂ ಕೂಡ ನೀಡಲಾಗಿಲ್ಲ. ಬದಲಿಗೆ ಅದು ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಕೊಳೆಯುತ್ತಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights