ಡಿ.ಕೆ.ಶಿವಕುಮಾರ್ ಗೆ ಜಾಮೀನು ಹಿನ್ನೆಲೆ : 108 ತೆಂಗಿನಕಾಯಿ ಹೊಡೆದು ಗಣಪತಿಗೆ ಹರಕೆ ತೀರಿಸಿದ ಅಭಿಮಾನಿಗಳು

ಡಿ.ಕೆ. ಶಿವಕುಮಾರ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ  ಶಿವಮೊಗ್ಗದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಹಾಗೂ 108 ತೆಂಗಿನಕಾಯಿ ಹೊಡೆದು ಗಣಪತಿಗೆ ಹರಕೆ ತೀರಿಸಿದ್ದಾರೆ.

ಶಿವಮೊಗ್ಗದ ರಾಮಣ್ಣಶ್ರೇಷ್ಠಿ ಗಣಪತಿ ದೇವಸ್ಥಾನದಲ್ಲಿ ಜಿಲ್ಲಾಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್ ಮತ್ತು ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ವಿಜಯಕುಮಾರ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ. ಡಿ.ಕೆ.ಶಿ. ಗೆ ಆಯುರ್ಯೋಗ್ಯಕ್ಕೆ ಪ್ರಾರ್ಥಿಸಿ, ವಿಶೇಷ ಪೂಜೆ ನೆರವೇರಿಸಲಾಯ್ತು.

ಈ ವೇಳೆ ಅಭಿಮಾನಿಗಳು ಡಿ.ಕೆ. ಶಿವಕುಮಾರ್ ಗೆ ಜೈಕಾರ ಹಾಕಿದರು.  ಪೂಜೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್, ಮಾಜಿ ಶಾಸಕ ಪ್ರಸನ್ನ ಕುಮಾರ್ , ಜಿಲ್ಲಾಧ್ಯಕ್ಷ ಸುಂದರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇನ್ನೂ  ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೈಲಿಂದ ರಿಲೀಸ್ ಹಿನ್ನೆಲೆ, ರಾಮನಗರದಲ್ಲಿ ಮುಸ್ಲಿಂ ಭಾಂದವರಿಂದ ಪ್ರಾರ್ಥನೆ ಸಲ್ಲಿಸಿ ಡಿ.ಕೆ.ಶಿವಕುಮಾರ್ ಗೆ ಮುಂದೆ ಎಲ್ಲವೂ ಶುಭವಾಗಲಿ ಎಂದು ಹಾರೈಸಿದರು. ದರ್ಗಾದಲ್ಲಿ ಪರಸ್ಪರ ಸಿಹಿ ತಿನಿಸುವ ಮೂಲಕ ಸಂಭ್ರಮಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights