ದೀನರ ಸಂಕಷ್ಟಕ್ಕೆ ಮರುಗಿದ ಕ್ರಿಕೆಟಿಗ : ಬಡ ಕುಟುಂಬಗಳಿಗೆ ಆಹಾರ ವಿತರಿಸಿದ ರಘುರಾಮ್ ಭಟ್
ದೀನರ ಸಂಕಷ್ಟಕ್ಕೆ ಮರುಗಿದ ಟೀಂ ಇಂಡಿಯಾ ಮಾಜಿ ಆಟಗಾರ ರಘುರಾಮ್ ಭಟ್ ಬೆಂಗಳೂರಿನ ಸಂಜಯ್ ನಗರದಲ್ಲಿ ಸೋಮವಾರ ಸುಮಾರು 150 ಬಡ ಕುಟುಂಬಗಳಿಗೆ ಆಹಾರಾ ವಿತರಿಸಿದ್ದಾರೆ.
ಹೌದು… ಎರಡು ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಭಟ್ ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡಿದ್ತದು,ರಕಾರಿಗಳು, ಉಪ್ಪು, ಸಕ್ಕರೆ, ಅಕ್ಕಿ ಮತ್ತು ಬೆಳೆ ಸೇರಿದಂತೆ ಇತರ ಅಗತ್ಯ ಆಹಾರ ಉತ್ಪನ್ನಗಳನ್ನು ಬಡವರಿಗೆ ನೀಡಿದ್ದಾರೆ. ಅವರ ವೃತ್ತಿಜೀವನದ ದಿನಗಳೊಂದಿಗೆ ಹೋಲಿಕೆ ಮಾಡಿದ ಭಟ್ “ನನಗೆ ತುಂಬಾ ಸಂತೋಷವಾಗಿದೆ. ನೀವು ನನ್ನನ್ನು ನಂಬದೇ ಇರಬಹುದು, ಆದರೆ ಬಡವರಿಗೆ ಸಹಾಯ ಮಾಡುವುದರಿಂದ ನಾನು ಭಾರತಕ್ಕಾ ಆಟವಾಡಿದ್ದಾಗ ಅನುಭವಿಸಿದ್ದಕ್ಕಿಂತ ಹೆಚ್ಚು ಸಂತೋಷ ಅನುಭವಿಸಿದೆ. ಸಣ್ಣ ಗುಡಿಸಲುಗಳಲ್ಲಿ ವಾಸಿಸುವ ಆಹಾರ ಮತ್ತು ಹಣವಿಲ್ಲದ ಬಡವರಿಗೆ ಸಹಾಯ ಮಾಡುವ ಸಮಯವಿದು. ಕೆಲವರಿಗಂತೂ ದಿನಕ್ಕೆ ಒಪ್ಪೊತ್ತಿನ ಊಟ ಪಡೆಯುವುದು ಸಹ ಕಷ್ಟಕರವಾಗುತ್ತಿದೆ. ಅಂತಹ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದ ತನ್ನ ಆಪ್ತ ಸ್ನೇಹಿತ ಚಂದ್ರು ನನಗೆ ಪ್ರೇರಣೆಯಾಗಿದ್ದಾರೆ’ ಎಂದಿದ್ದಾರೆ.