ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ : ನಟಿಗೆ ಸರ್ಕಾರದ ನಿಮಯಗಳು ಅನ್ವಯವಾಗೋದಿಲ್ಲಾ…?
ಕೊರೊನಾ ವೈರಸ್ ನಿಂದಾಗಿ ದೇಶವೇ ಲಾಕ್ ಡೌನ್ ಆಗಿದೆ. ಹೀಗಿದ್ದರೂ ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಜಾಗ್ವಾರ ಕಾರಿನಲ್ಲಿ ಜಾಲಿ ರೈಡ್ ಮಾಡುವ ವೇಳೆ ಅಪಘಾತವಾಗಿರುವ ಘಟನೆ ಬೆಂಗಳೂರಿನ ವಸಂತ ನಗರದ ಅಂಡರ್ ಪಾಸ್ ನಲ್ಲಿ ನಡೆದಿದೆ.
ಹೌದು… ಸರ್ಕಾರದ ನಿಯಮ ಪಾಲಿಸಿ ಮತ್ತೊಬ್ಬರಿಗೆ ಮಾದರಿಯಾಗಬೇಕಾಗಿದ್ದ ನಟಿ ಶರ್ಮಿಳಾ ಮಾಂಡ್ರೆ ಜಾಲಿ ರೈಡ್ ಮಾಡಿ ಅಪಘಾತಕ್ಕೆ ಒಳಗಾಗಿದ್ದಾರೆ. ನಗರದ ವಸಂತನಗರ ಅಂಡರ್ ಪಾಸ್ ಪಿಲ್ಲರ್ಗೆ ಕಾರು ಡಿಕ್ಕಿ ಹೊಡೆದಿದ್ದು ನಟಿ ಹಾಗೂ ಕಾರ್ ಡ್ರ್ಐವ್ ಮಾಡುತ್ತಿದ್ದ ನಟಿಯ ಸ್ನೇಹಿತ ಲೋಕೇಶ್ ಅನ್ನೋರಿಗೂ ಗಾಯಗಳಾಗಿವೆ. ನಟಿ ಈಗಾಗಲೇ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ನಟಿಯ ಸ್ನೇಹಿತ ಲೋಕೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟಿಯ ವಿಚಾರಣೆ ವೇಳೆ ನಟಿ ಶರ್ಮಿಳಾ ಪೊಲೀಸರಿಗೆ ದಾರಿ ತಪ್ಪಿಸೋ ಕೆಲಸ ಮಾಡಿದ್ದಾರೆ. ಈ ವೇಳೆ ನಟಿ ತಮ್ಮ ಕಾರು ಜೆಪಿ ನಗರದಲ್ಲಿ ಅಪಘಾತಕ್ಕೆ ಒಳಗಾಗಿದೆ ಎಂದು ಹೇಳಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು. ಮದ್ಯಪಾನ ಮಾಡಿ ಕಾರ್ ಡ್ರೈವ್ ಮಾಡಲಾಗುತ್ತಿತ್ತಾ ಅನ್ನೋ ಅನುಮಾನ ಶುರುವಾಗಿದೆ.
ಇವರು ಮಧ್ಯಪಾನ ಮಾಡಿ ಕಾರು ಚಲಾಯಿಸಿದ್ದಾರಾ..? ಮದ್ಯರಾತ್ರಿ 3 ಗಂಟೆಗೆ ಇವರು ಎಲ್ಲಿಗೆ ಹೊರಟಿದ್ದರು. ಇವರನ್ನು ಬಿಟ್ಟಿದ್ದು ಯಾರು ಎನ್ನುವ ಪ್ರಶ್ನೆ ಎದುರಾಗಿದೆ… ಆದರೆ ಯಾರು ಡ್ರೈವ್ ಮಾಡ್ತಾಯಿದ್ರು ಅನ್ನೋದು ಮಾತ್ರ ಸ್ಪಷ್ಟ ವಾಗಿಲ್ಲ. ನಟಿಯ ಸ್ನೇಹಿತ ತಾನು ಡ್ರೈವ್ ಮಾಡುತ್ತಿದ್ದರ ಬಗ್ಗೆ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಇವರು ರಾತ್ರಿ ಹೊರಬಂದಿದ್ದು ಯಾಕೆ…? ನಟಿಗೆ ಲಾಕ್ ಡೌನ್ ಅನ್ವಯವಾಗುವುದಿಲ್ಲವೇ..? ಲಾಕ್ ಡೌನ್ ನನ್ನು ಉಲ್ಲಂಘನೆ ಮಾಡಿದ್ದಕ್ಕೆ ನಟಿ ವಿರುದ್ಧ ಕ್ರಮಕ್ಕೆ ಜನ ಆಗ್ರಹಿಸಿದ್ದಾರೆ.
ನಟಿ ಶಾರ್ಮಿಳಾ ಹಾಗೂ ನಟಿಯ ಸ್ನೇಹಿತ ಲೋಕೇಶ್ ಎಂಬಾತ ಇಬ್ಬರು ಇದ್ದ ಜಾಗ್ವರ್ ಕಾರು ರಾತ್ರಿ 3 ಗಂಟೆಗೆ ವಸಂತ್ ನಗರದ ಅಂಡರ್ ಪಾಸ್ ನಲ್ಲಿ ಅಪಘಾತಕ್ಕೆ ಒಳಗಾಗಿದೆ. ಇಷ್ಟೊತ್ತಿನಲ್ಲಿ ಇವರನ್ನು ಬಿಟ್ಟವರು ಯಾರು..? ಜೊತೆಗೆ ಇವರು ಪೊಲೀಸ್ ಇಲಾಖೆ ನೀಡಲಾಗಿದ್ದ ಪಾಸ್ ನ್ನು ಬಳಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸಧ್ಯ ತನಿಖೆಯಾಗಬೇಕಿದೆ.