ನಾಗರಪಂಚಮಿಯಲ್ಲಿ ಹುತ್ತಕ್ಕೆ ಹಾಲು ಸುರಿಯದೆ ಬಡ ಜನರಿಗೆ ವಿತರಿಸಿದ ಜನತೆ….

ನಾಗರಪಂಚಮಿಯಲ್ಲಿ ಹುತ್ತಕ್ಕೆ ಹಾಲು ಸುರಿಯದೆ ಗ್ರಾಮಸ್ಥರು ಬಡ ಜನರಿಗೆ ವಿತರಿಸಿ ಮಾದರಿಯಾದ ಘಟನೆ ಮಂಡ್ಯ ಕೋಮನಹಳ್ಳಿಯಲ್ಲಿ ನಡೆದಿದೆ.

ಹುತ್ತಕ್ಕೆ ಹಾಲೆರೆದು ವ್ಯರ್ಥವಾಗೋ ಹಾಲನ್ನು ಸಂಗ್ರಹಿಸಿದ ಪ್ರಗತಿಪರ ರೈತನೊಬ್ಬ ಊರಿನವರಿಗೆ ಹಂಚಿಕೆ ಮಾಡಿದ್ದಾನೆ. ನೆನ್ನೆ ರಾತ್ರಿ‌ ಆ ಊರಿನಲ್ಲಿ ನಾಗರಪಂಚಮಿ ಆಚರಿಸುವ ಸಂಪ್ರದಾಯವಿತ್ತು. ಈ ವೇಳೆ ಕೋಮನಹಳ್ಳಿಯ ಪ್ರಗತಿಪರ ರೈತ ರೋಬೋ‌ ಮಂಜೇಗೌಡ ನೇತೃತ್ವದಲ್ಲಿ ಜನರ ಮನವೊಲಿಕೆ‌ ಮಾಡಿ ಈ ಉತ್ತಮ ಕೆಲಸ ಮಾಡಲಾಗಿದೆ.

ಹುತ್ತದ ಪೂಜೆಗೆ ಬಂದ ಗ್ರಾಮಸ್ಥರ ಮನವೊಲಿಸಿ ಹುತ್ತಕ್ಕೆ ಹಾಲು ಹಾಕದಂತೆ ಮನವಿ ಮಾಡಿ ಹಾಲು ಸಂಗ್ರಹಣೆ ಮಾಡಿದ್ದಾರೆ. ಮಂಜೇಗೌಡರ ಮನವೊಲಿಕೆ ಮೇರೆಗೆ ಪೂಜೆಗೆಂದು ತಂದಿದ್ದ ಹಾಲನ್ನು ಊರಿನ ಜನರಿಗೆ ಹಂಚಿಕೆ ಮಾಡಲಾಗಿದೆ.

ಹುತ್ತಕ್ಕೆ ಹಾಲು ಹುಯ್ದು ವ್ಯರ್ಥ ಮಾಡದಂತೆ ಮನವಿ ಮಾಡಿ ಗ್ರಾಮಸ್ಥರಿಗೆ ಅರಿವು ಮೂಡಿಸ್ತಿರೋ ಮಂಜೇಗೌಡ ನಿಜವಾಗಲೂ ನಾವೆಲ್ಲ ಹ್ಯಾಂಡ್ಸ್ ಆಪ್ ಹೇಳಲೇ ಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights