ನಿಜಾಮುದ್ದೀನ್ ಜಮತ್ ಗೆ ಹೋಗಿದ್ದ ಕೊರೊನಾ ಸೋಂಕಿತ ಆಸ್ಪತ್ರೆಯಲ್ಲಿ ಆತ್ಮಹತ್ಯೆ..!
ದೆಹಲಿಯ ಜಮತ್ ಗೆ ಹೋಗಿದ್ದ ಎನ್ನಲಾದ ಕೊರೊನಾ ಸೋಂಕಿತ ಐಸೋಲೇಷನ್ನಲ್ಲಿಯೇ ಕತ್ತು ಕೊಯಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಕೋಲಾದಲ್ಲಿ ನಡೆದಿದೆ.
ಹೌದು… ಕೊರೊನಾ ಸೋಂಕಿತ ತಬ್ಲಿಘಿಯೋರ್ವ ಐಸೋಲೇಷನ್ ವಾರ್ಡ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಶರಣಾದ 30 ವರ್ಷದ ವ್ಯಕ್ತಿ ಅಸ್ಸಾಂ ನ ನಾಗಾಂವ್ ಗ್ರಾಮದ ನಿವಾಸಿಯಾಗಿದ್ದು,ಮೃತ ಸೋಂಕಿತ ಮಾರ್ಚ್ 6ರಿಂದ 8ರವರೆಗೆ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಜಮಾತ್ ನಲ್ಲಿ ಭಾಗಿಯಾಗಿದ್ದರು. ತದನಂತರ ಕೆಲ ಸದಸ್ಯರ ಜೊತೆ ಮಹಾರಾಷ್ಟ್ರದ ಅಕೋಲಾಗೆ ಬಂದಿದ್ದನು. ಅಕೋಲಾಗೂ ಮೊದಲು ಈ ತಂಡ ಬಲರಾಂಪುದಲ್ಲಿ ವಾಸ್ತವ್ಯ ಮಾಡಿತ್ತು ಎಂದು ಜಿಲ್ಲಾಧಿಕಾರಿ ಜಿತೇಂದ್ರ ಪಾಪಲಕರ್ ಮಾಹಿತಿ ನೀಡಿದ್ದಾರೆ.
ಏಪ್ರಿಲ್ 7ರಂದು ಈ ಜಮಾತ್ ಸದಸ್ಯರು ತಾವೇ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲರ ಆರೋಗ್ಯದಲ್ಲಿ ಬದಲಾವಣೆ ಕಂಡು ಬಂದಿದ್ದರಿಂದ ಸದಸ್ಯರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಏಪ್ರಿಲ್ 10ರಂದು ಬಂದ ವರದಿಯಲ್ಲಿ ಓರ್ವ ಕೊರೊನಾ ಸೋಂಕು ತಗುಲಿರೋದು ಖಚಿತವಾಗಿದೆ.
ಮರುದಿನ ಅಂದ್ರೆ ಶನಿವಾರ ಏ. 11ರಂದು ಆಸ್ಪತ್ರೆಯಲ್ಲಿ ಹರಿತವಾದ ವಸ್ತುವಿನಿಂದ ಆತ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇದೇ ಐಸೋಲೇಷನ್ ವಾರ್ಡ್ ನಲ್ಲಿ 12 ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಕುರಿತು 12 ಜನರಿಂದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಪ್ರಕಾರ, ಸಾವನ್ನಪ್ಪಿದ ವ್ಯಕ್ತಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದನು. ಈತ ಕಳೆದ 10 ತಿಂಗಳಿನಿಂದ ಕುಟುಂಬಸ್ಥರಿಂದ ದೂರವಿದ್ದ ಕಾರಣ ನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗುತ್ತಿದೆ.