ನಿಯತ್ತಿನ ಪ್ರಾಣಿ : ಸಾಕಿದ ಯಜಮಾನನ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಮೇಕೆ…!
ಮೇಕೆಯೊಂದು ಸಾಕಿದ ಯಜಮಾನನ ಅಂತ್ಯಕ್ರಿಯೆಗಾಗಿ ಬರೋಬ್ಬರಿ ೧.೦೫ ಕಿ.ಮೀ ದೂರದ ಸ್ಮಶಾನಕ್ಕೆ ಬಂದು ಭಾಗಿಯಾದ ಘಟನೆ ಜನರನ್ನು ಆಶ್ಚರ್ಯಗೊಳ್ಳುವಂತೆ ಮಾಡಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮರಕಲದಿನ್ನಿ ಗ್ರಾಮದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ೪೮ ವರ್ಷದ ಅಮರಪ್ಪ ಕುರುಬರು ಜಮೀನಿನಲ್ಲ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಮರಪ್ಪನ ಮೆಚ್ವಿನ ಮೇಕೆ ಇದಾಗಿತ್ತು.
ಯಜಮಾನನ ಅಂತ್ಯಕ್ರಿಯೆ ಮುಗಿಯುವ ತನಕ ಸ್ಥಳ ಬಿಟ್ಟು ಕದಲದ ಮೇಕೆಯ ವರ್ತನೆಯ ದೃಶ್ಯ ಕಂಡ ಜನ ಅಚ್ಚರಿಯಿಂದ ಮೇಕೆ ನಿಯತ್ತಿನ ಬಗ್ಗೆ ಮಾತಾಡಿಕೊಂಡಿದ್ದಾರೆ.