‘ಪಕ್ಕೆಲುಬು’ ಪದದ ಉಚ್ಛಾರಣೆ ಮಾಡದ ವಿದ್ಯಾರ್ಥಿ ವಿಡಿಯೋ ವೈರಲ್ ವಿಚಾರ : ಸುರೇಶ್ ಕುಮಾರ್ ಗರಂ

‘ಪಕ್ಕೆಲುಬು’ ಪದದ ಉಚ್ಛಾರಣೆ ಮಾಡದ ವಿದ್ಯಾರ್ಥಿ ವಿಡಿಯೋ ವೈರಲ್ ವಿಚಾರಕ್ಕೆ ಸಚಿವ ಸುರೇಶ್ ಕುಮಾರ್ ಗರಂ ಆಗಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ ಗ್ರಾಮದಲ್ಲಿ ರಾಜಾನುಕುಂಟೆ ಗ್ರಾಪಂ ಡಿಜಿಟಲ್‌ ಲೈಬ್ರರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ‘ಪಕ್ಕೆಲುಬು’ ಪದದ ಉಚ್ಛಾರಣೆ ಮಾಡದ ವಿದ್ಯಾರ್ಥಿ ವಿಡಿಯೋ ವೈರಲ್ ಮಾಡಿದ್ದಕ್ಕೆ ಗರಂ ಆಗಿದ್ದಾರೆ. ಎಲ್ಲರಿಗೂ ಒಂದಲ್ಲ ಒಂದು ಕೊರತೆ ಇರುತ್ತದೆ. ಅಮಾನವೀಯ ಘಟನೆ ಇದು ಮಗುವಿಗೆ ಮಾಡಿದ ಅವಮಾನವಿದು. ಈ ವಿಡಿಯೋ ಮಗು ನೋಡಿದರೆ ಖಿನ್ನತೆಗೆ ಒಳಗಾಗುತ್ತೆ ಎಂದು ಆರೋಪ ಮಾಡಿದ್ದಾರೆ.

ಈ ಬಗ್ಗೆ ಇದಾಗಲೇ ಸೈಬರ್ ಕ್ರೈಂ ನಲ್ಲಿ ಪ್ರಕರಣ ದಾಖಲಿಸುವಂತೆ ಹೇಳಲಾಗಿದೆ. ಎಲ್ಲಾ ಡಿಡಿಪಿಐ ಗಳಿಗೆ ಆದೇಶ ಸಹ ಹೊರಡಿಸಲಾಗಿದೆ. ಈ ಕೃತ್ಯ ಮಾಡಿದವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights