ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ವಿರುದ್ಧ ಕಾಂಗ್ರೆಸ್ ಸೋಶಿಯಲ್ ಮಿಡಿಯಾದಲ್ಲಿ ವಾರ್…
ಅಥಣಿಯ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ವಿರುದ್ಧ ಕಾಂಗ್ರೆಸ್ ಸೋಶಿಯಲ್ ಮಿಡಿಯಾದಲ್ಲಿ ವಾರ್ ಶುರುವಾಗಿದೆ.
ಇಂಥವರು ನಮಗೆ ಬೇಕಾ? ಎಂದು ಪ್ರಶ್ನೆ ಹಾಕಲಾಗುತ್ತಿದೆ.ಮಹೇಶ ಕುಮಠಳ್ಳಿ ವಿರುದ್ಧ ಪೋಸ್ಟ್ ಗಳು ವಾಟ್ಸಪ್ ನಲ್ಲಿ ಹರಿದಾಡ್ತಿವೆ. ಪ್ರವಾಹ ಸಂದರ್ಭದಲ್ಲಿ ಕುಮಠಳ್ಳಿ ಮತ್ತು ಪ್ರವಾಹ ಸಂತ್ರಸ್ತರ ಪರಿಸ್ಥಿತಿ ತುಲನೆ ಮಾಡಿರುವ ಪೋಸ್ಟ್ ಗಳು ಹರಿದಾಡುತ್ತಿವೆ.
ಅನರ್ಹ ಕುಮಟಳ್ಳಿ ಪಂಚತಾರಾ ಹೋಟೆಲಿನಲ್ಲಿ ರೂ.2000 ಚಹಾ ಕುಡಿಯುತ್ತಿದ್ದರು. ನಾವು ಪ್ರವಾಹಕ್ಕೆ ಸಿಕ್ಕು ಒಂದಯ ಹೊತ್ತಿನ ಗಂಜಿಗಾಗಿ ಪರದಾಡುತ್ತಿದ್ದೇವು. ನಮ್ಮ ಮನೆ ಮುಳುಗುತ್ತಿತ್ತು. ಕುಮಠಳ್ಳಿ ಅವರು 60 ದಿನ ಪಂಚತಾರಾ ಹೋಟೇಲಿನಲ್ಲಿ ರು2000 ಕಪ್ ಚಹ ಕುಡಿಯುತ್ತಿದ್ದರು. ನಮಗೆ ಕುಡಿಯಲು ಒಂದು ಗ್ಲಾಸ್ ಗಂಜಿ ಇರಲಿಲ್ಲ. ಇಂಥವರು ನಮಗೆ ಬೇಕಾ?
ಅನರ್ಹರನ್ನು ಸೋಲಿಸಿ. ಪ್ರಜಾಪ್ರಭುತ್ವವನ್ನು ಉಳಿಸಿ. ಕಾಂಗ್ರೆಸ್ ಬೆಂಬಲಿಸಿ. ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಜೊತೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ತುಲನೆ ಮಾಡಿಯೂ ಕಾಂಗ್ರೆಸ್ ಪೋಸ್ಟ್ ಮಾಡಲಾಗಿದೆ.
ಅನರ್ಹ ಮಹೇಶ ಕುಮಠಳ್ಳಿ ಸಾಧನೆ, ಅರ್ಹ ಗಜಾನನ ಮಂಗಸೂಳಿ ಸಾಧನೆ ತುಲನೆ ಮಾಡಲಾಗಿದೆ.
ಆಪರೇಶನ್ ಕಮಲಕ್ಕೆ ತನ್ನನ್ನು ತಾನು ಮಾರಿಕೊಂಡ ಕುಮಠಳ್ಳಿ, ಸರಳ, ಸಜ್ಹನ, ಜನಪರ ರಾಜಕಾರಣಿ ಗಜಾನನ ಮಂಗಸೂಳಿ. ಮಂತ್ರಿಗಿರಿಗಾಗಿ ಕಂತ್ರಿ ಕೆಲಸ ಮಾಡಿದ್ದು ಕುಮಠಳ್ಳಿ, ಅಥಣಿ ಹಿರಿಯ ಮುತ್ಸದ್ದಿ ರಾಜಕಾರಣಿ ಮಂಗಸೂಳಿ. ನೆರೆ ಪ್ರವಾಹ ನೀಡುವ ಬದಲು ಮುಂಬೈ ಹೋಟೇಲ್ ನಲ್ಲಿ ಮೋಜು ಮಾಡಿದ್ದು ಕುಮಠಳ್ಳಿ ಎಂದು ಪೋಸ್ಟರ್ ನಲ್ಲಿ ತೋರಿಸಲಾಗಿದೆ.
ನಾನಾ ರೀತಿಯಲ್ಲಿ ಅಥಣಿ ಬಿಜೆಪಿ ಅಭ್ಯರ್ಥಿಯನ್ನು ಟೀಕಿಸಿ ವಾಟ್ಸಪ್ ನಲ್ಲಿ ಕಾಂಗ್ರೆಸ್ ಸಮರ ಸಾರಿದೆ.