ಬಿಜೆಪಿ ಕೋಮುವಾದಿ ಪಕ್ಷ ಎಂದಿದ್ದ ಮಾಜಿ ಸಿಎಂ ಸಿದ್ದುಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿರುಗೇಟು

ಹೊಸಕೋಟೆಯ ಅನುಗೊಂಡನಹಳ್ಳಿ ಪ್ರಚಾರದ ವೇಳೆ  ಮಾಜಿ ಸಿಎಂ ಸಿದ್ದುಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿರುಗೇಟು ಕೊಟ್ಟಿದ್ದಾರೆ.

ಹೌದು… ಬಿಜೆಪಿ ಕೋಮುವಾದಿ ಪಕ್ಷ ಎಂದು ಜರಿದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ಕೋಮುವಾದಿವಾಗಿದ್ದರೆ ದೇಶಾದ್ಯಂತ ಬಿಜೆಪಿ ಅಧಿಕಾರದಲ್ಲಿ ಇರುತ್ತಿರಲಿಲ್ಲ. ನಾವಲ್ಲ ಕೋಮುವಾದಿಗಳು ಕಾಂಗ್ರೆಸ್ಸಿಗರು ಕೋಮುವಾದಿಗಳು. ಕಳೆದ ಚುನಾವಣೆಯಲ್ಲಿ ಯಾಕೆ ಸೋತ್ರು. ಇವರ ಕಾಟ ತಾಳಲಾರದೆ ಶಾಸಕರು ನಮ್ಮ ಪಕ್ಷಕ್ಕೆ ಬರ್ತಿದ್ದಾರೆ. ಬೇರೆ ಪಕ್ಷದಿಂದ ಶಾಸಕರು ನಮ್ಮ ಪಕ್ಷಕ್ಕೆ ಬರುವಾಗ ಇವರು ಬಳೆ ತೊಟ್ಟುಕೊಂಡಿದ್ರ ಎಂದು ಸಿದ್ದು ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಿನ್ನೆ ಹೊಸಕೋಟೆ ಕ್ಷೇತ್ರದ ಹಲವು ಕಡೆ ನಡೆದ ಸಭೆಗೆ ವಲಸಿಗರನ್ನು ಕರೆಯಲಾಗಿತ್ತು. ವಲಸಿಗರನ್ನು ಕರೆ ತಂದು ಸಮಾವೇಶ ನಡೆಸಲು ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು. ಎಂಟಿಬಿ ನಾಗರಾಜ್ ಸೋಲಿಸಲು ಇವರು ಬ್ರಹ್ಮ ವಿಷ್ಣು ಮಹೇಶ್ವರರ. ಬ್ಲಾಕ್ ಮೇಲ್ ಮಾಡಿ ವಿರೋಧ ಪಕ್ಷದ ನಾಯಕರಾಗಿದ್ದೀರಿ.

ಆಪರೇಷನ್ ಕಮಲದ ಪಿತಾಮಹ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನಾಯ್ಡು, ನಿಮಗೆ ಶಾಸಕರನ್ನ ಇಟ್ಟುಕೊಳ್ಳಲು ಶಕ್ತಿಯಿಲ್ಲ. ಎಲ್ಲರೂ ನಮ್ಮ ಪಕ್ಷಕ್ಕೆ ಬರ್ತಾ ಇದ್ರೆ ಸೀರೆ ಕಟ್ಟಿಕೊಂಡಿದ್ರಾ. ಯಡಿಯೂರಪ್ಪರವರು ಗಂಡಸು ಕೆಲಸ ಮಾಡಿದ್ದಾರೆ. ಹಾಗಾದರೆ ನೀವು ಹೆಂಗಸರು ಅದಕ್ಕೆ ತಡೆಯಲು ಆಗಲಿಲ್ಲ. ನಮ್ಮ ಪಕ್ಷಕ್ಕೆ ಬಂದವರಿಗೆ ಬುದ್ಧಿ, ಶಕ್ತಿ, ಹಣ ಇರಲಿಲ್ವ. ನಿಮ್ಮ ಕಾಟ ತಾಳಲಾರದೆ ನಮ್ಮ ಪಕ್ಷಕ್ಕೆ ಬಂದಿದ್ದಾರೆ ಎಂದು ಆಪರೇಷನ್ ಕಮಲ ಸಮರ್ಥಿಸಿಕೊಂಡರು.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights