ಬೆಣ್ಣೆ ನಗರಿಯಲ್ಲಿ ಹೊಸದಾಗಿ 21 ಕೊರೊನಾ ಕೇಸ್! ರಾಜ್ಯದಲ್ಲಿ 642ಕ್ಕೇರಿದ ಸೋಂಕಿತರ ಸಂಖ್ಯೆ!
ರಾಜ್ಯದಲ್ಲಿಂದು ಲಾಕ್ ಡೌನ್ ಸಡಿಲಿಕೆಗೊಂಡಿದ್ದು ಇಂದಿನ ಸೋಂಕಿತರ ಸಂಖ್ಯೆ ವೀಕ್ಷಿಸುತ್ತಿದ್ದರೆ ಆತಂಕ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 28 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 642ಕ್ಕೇರಿಕೆಯಾಗಿದೆ.
ಹೌದು… ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 28 ಜನರಿಗೆ ಸೋಂಕು ಹರಡಿದೆ. ಚಿಕ್ಕಬಳ್ಳಾಪುರ 1 ,ಹಾವೇರಿ 1, ಮಂಡ್ಯ 2, ವಿಜಯಪುರ 1, ಕಲಬುರಗಿಯಲ್ಲಿ 2, ಬೆಣ್ಣೆ ನಗರಿ ದಾವಣಗೆರೆಯಲ್ಲಿ 21 ಮಂದಿಗೆ ಸೋಂಕು ಪತ್ತೆಯಾಗಿದೆ.
ದಿನೇ ದಿನೇ ಸೋಂಕಿತರ ಸಂಖ್ಯೆ ಗಣನೀಯ ಏರಿಕೆಯಾಗುತ್ತಿದ್ದು, ರಾಜ್ಯದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಈ ವರೆಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 642ಕ್ಕೇರಿಕೆಯಾಗಿದ್ದು, 26 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 304 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಒಂದೇ ದಿನದಲ್ಲಿ 28 ಪಾಸಿಟಿವ್ ಕೇಸ್ ನಲ್ಲಿ 21 ಜನ ಸೋಂಕಿತರು ದಾವಣೆಗೆರೆಯಲ್ಲಿ ದೃಢಪಟ್ಟಿದ್ದು, ಗ್ರೀನ್ ಜೋನ್ ಆಗಿದ್ದ ದಾವಣಗೆರೆಯಲ್ಲಿ ಏಕಾಏಕಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.
ಈ ಬೆಳವಣಿಗೆಯಿಂದಾಗಿ ಜನ ಆತಂಕಗೊಂಡಿದ್ದು ದಾವಣಗೆರೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.