ಮರ್ಯಾದೆ ಹೆಸರಿನಲ್ಲಿ ನಡೆದ ಅಮಾನವೀಯ ಜೋಡಿ ಹತ್ಯೆ…!

ಮರ್ಯಾದೆ ಹೆಸರಿನಲ್ಲಿ ಅಮಾನವೀಯವಾಗಿ ಜೋಡಿ ಹತ್ಯೆ ಮಾಡಿದ ಘಟನೆ ಗದಗಿನ ಗಜೇಂದ್ರಗಡದ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದೆ.

ರಮೇಶ್ ಶಿವಪ್ಪ ಹಿಂದೂ ಮಾದರ ಹಾಗೂ ಗಂಗಾ(ಚನ್ನವ್ವ)ಎನ್ನುವ ಇಬ್ಬರು ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿದ್ದರು. ಜಾತಿಯಿಂದ ಮಾದಿಗ (ಹುಡುಗ) ಹುಡುಗಿ(ಲಂಬಾಣಿ) ಜಾತಿಯಾದ ಕಾರಣ ಮದುವೆ ಜಾತಿಗಳು ಅಡ್ಡಿ ಮಾಡಲಾಗಿತ್ತು. ಈ ವೇಳೆ ಊರು ಬಿಟ್ಟು ಹೋಗಿ ಇಬ್ಬರು ಮದುವೆಯಾಗಿದ್ದರು. ನಗರ ಪ್ರದೇಶದಲ್ಲಿ ಕಟ್ಟಡದ ಕಾರ್ಮಿಕ ಕೆಲಸ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಈ ಜೋಡಿಗೆ ಎರಡು ಮಕ್ಕಳು ಇವೆ. ಮೊದಲನೆ ಮಗುವಿಗೆ 2 ವರ್ಷ ಎರಡನೇ ಮಗುವಿಗೆ 2 ತಿಂಗಳು.

ಹುಟ್ಟಿದ ಊರಿಗೆ ಈ ಜೋಡಿ ಭೇಟಿ ನೋಡುತ್ತಿದ್ದರು. ಆದರೆ ಇದನ್ನ ಸಹಿಸದ ಹುಡುಗಿಯ ಅಣ್ಣಂದಿರು ಪದೇ ಪದೇ ಕಾಲು ಕೆದರಿ ಜಗಳ ಮಾಡಿಕೊಂಡಿಕೊಂಡು, ನಿನ್ನೆ ಮನೆಯಲ್ಲಿ ಇದ್ದ ಇಬ್ಬರನ್ನೂ ಕೊಚ್ಚಿ ಭಯಾನಕವಾಗಿ ಕೊಲೆ ಮಾಡಿದ್ದಾರೆ. ರಕ್ತದ ಮಡಲಿನಲ್ಲಿ ಈ ಜೋಡಿ ಮರ್ಯಾದೆ ಹತ್ಯೆ ನಡೆಸಿದ್ದು ರಾಜ್ಯವನ್ನೆ ಬೆಚ್ಚಿಬಿಳಿಸಿದೆ. ಈ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಂಬಾಣಿ ಸಮುದಾಯ ಕುಟುಂಬಗಳು ವಾಸಿಸುತ್ತವೆ. ಈ ಜೋಡಿ ಕೊಲೆಗೆ ಬೆಚ್ಚಿಬಿದ್ದ ಮಾದಿಗ ಕುಟುಂಬಗಳು ಊರು ತೋರಿದಿದ್ದಾರೆ.

ಜಾತಿ ಅಸ್ಪೃಶ್ಯತೆ ಸಮಾಜಿಕ ಅಸಮಾನತೆ ತಳ ಸಮುದಾಯಗಳು ಅಗಿರುವ ಮೀಸಲಾತಿ ಅಡಿಯಲ್ಲಿ ಬರುವ ಇಂತಹ ಜಾತಿಗಳು ಕೂಡ ಯಾವ ತರನಾದ ಬೇರು ಬಿಟ್ಟಿದ ಒಬ್ಬ ಮಾದಿಗ ಸಮುದಾಯದ ಹುಡುಗ ಒಬ್ಬ ಲಂಬಣಿ ಸಮುದಾಯದ ಹುಡುಗಿ ಮದುವೆಯಾಗಿದ್ದು ಕೂಡ ಘನಘೋರ ಅಪರಾಧ ಎಂದು ದ್ವೇಷ ಅಸೂಯೆ ಪಿತೂರಿ ಮಾಡಿ ಅಮಾನವೀಯ ಸ್ಥಿತಿಯಲ್ಲಿ ಕೊಚ್ಚಿ ಕೊಂದ ಹಾಕುತ್ತಾರೆ ಎಂದರೆ ಈ ಮೇಲು ಕೀಳು ಎನ್ನುವ ಜಾತಿಯ ವಿಷಬೀಜ ಮೆದುಳಿನ ಒಳಗೆ ಲಾಕ್ ಆಗಿರುವುದು ಕಂಡುಬರುತ್ತದೆ.

ಈ ಜೋಡಿಗೆ ಹುಟ್ಟಿದ ಮಕ್ಕಳು ಇನ್ನೂ ಚಿಕ್ಕವಯಸ್ಸು . ಬೆಳೆದ ನಂತರ ಆ ಮಕ್ಕಳಿಗೆ ನಿನ್ನ ತಂದೆ ತಾಯಿ ಇಂತಹ ಘೋರ ಮರ್ಯಾದೆ ಹತ್ಯೆ ಒಳಗಾಗಿ ಪ್ರಾಣ ಕಳೆದುಕೊಂಡರು ಎನ್ನಬೇಕೆ ಅಥವಾ ಮುಂದಿನ ಪೀಳಿಗೆ ತಲೆಮಾರಿನ ಯಾವ ರೀತಿ ಜೀವನ ರೂಪಿಸಿಕೊಡಲು ಸಾದ್ಯ ನಮ್ಮ ಈ ಕೆಟ್ಟ ಸಮಾಜದಿಂದ… ಜಾತಿ ನೆಪದಲ್ಲಿ ಪ್ರಾಣಿಗಳನ್ನು ಕೊಚ್ಚಿದಂತೆ ಕೊಚ್ಚಿ ಹಾಕುವ ಕ್ರೌರ್ಯ ಬದುಕುವ ಹಕ್ಕುಗಳನ್ನು ಕಿಳು ಜಾತಿಯವನನ್ನು ಮದುವೆ ಆದಳೂ ಎನ್ನುವ ಜಾತಿದ್ವೇಷಿ ಮನಸ್ಥಿತಿಯಿಂದ ತಾವೆ ಹುಟ್ಟಿಸಿದ ಮಗಳನ್ನು ಜೀವಂತ ಸಮಾಧಿ ಮಾಡುವ ಮೂಲಕ ಅವರಿಗೆ ಹುಟ್ಟಿದ ಮಕ್ಕಳ ನೋಡದೇ ಮಾನ ಮರ್ಯಾದೆ ಎನ್ನುವ ನೆಪದಲ್ಲಿ ಚಿಕ್ಕ ಮಕ್ಕಳ ಎದರಲ್ಲೆ ಪ್ರಾಣಿಗಳನ್ನು ಕೊಚ್ಚಿದಾಗೆ ಕೊಚ್ಚಿ ಸ್ವಂತ ಮಗಳನ್ನು ಅಳಿಯನನ್ನು ಕೊಲೆ ಮಾಡಿ ಬದಕುವ ಹಕ್ಕು ಚಿವಿಟು ಹಾಕುವ ಸಮಾಜದ ಬದಲಾವಣೆ ಪರಿವರ್ತನೆ ಆಗದೇ ಹೊದರೆ ಜಾತಿ ಪದ್ದತಿ ಜೀವಂತ ಇದೆ ಎಂದರ್ಥ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights