ರಾಗಿ ಮುದ್ದೆಯಲ್ಲಿ ಕೇಕ್‌ ಮಾಡಿ ಶಿವರಾಜ್ ಬರ್ತಡೇ ಸೆಲಬ್ರಷನ್

ಕರೋನ ಎಫೆಕ್ಟ್‌ನಿಂದಾಗಿ ಸೆಲೆಬ್ರಟಿಗಳ ಬರ್ತಡೇ ಸೆಲಬ್ರಷನ್‌ಗಳಿಗೂ ಅವಕಾಶವಿಲ್ಲದಂತಾಗಿದೆ. ಹಲವಾರು ಅಭಿಮಾನಿಗಳ ತಮ್ಮ ನೆಚ್ಚಿನ ಕಲಾವಿದರ ಬರ್ತಡೇಯನ್ನು ಆಚರಿಸಲಾಗದೆ ಬೇಸರಗೊಂಡಿದ್ದಾರೆ.
ಈ ನಡುವೆ ಇಂದು ನಟ ಕೆ.ಆರ್.ಪೇಟೆ ಶಿವರಾಜ್ ಹುಟ್ಟಿದ ದಿನ ಹಿನ್ನೆಲೆಯಲ್ಲಿ ಮುದ್ದೆಯನ್ನೇ  ಕೇಕ್  ಮಾಡಿ ಹುಟ್ಟುಹಬ್ಬವನ್ನು ಶಿವರಾಜ್ ಕುಟುಂಬದವರು ಆಚರಿಸಿದ್ದಾರೆ.
ಶಿವರಾಜ್ ಅವರು ತಮ್ಮ ಅಕ್ಕಬಾವನ ಊರು ಕೆ.ಆರ್ ನಗರದ ಮೇಲೂರಿನಲ್ಲಿದ್ದಾರೆ. ಅವರ ಫ್ಯಾಮಿಲಿ ಸದಸ್ಯರು ಶಿವರಾಜ್ ಅವ್ರ ಹುಟ್ಟುಹಬ್ಬವನ್ನ ಸಿಂಪಲ್ಲಾಗಿ ದೇಸಿ ಶೈಲಿಯಲ್ಲಿ ಆಚರಿಸಿದ್ದಾರೆ.
ಶಿವಾರಾಜ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್, ಪುರುಸೊತ್ ರಾಮ ರಿಲೀಸ್ ಗೆ ರೆಡಿಯಾಗಿದ್ದು, ನಿಖಿಲ್ ಕುಮಾರ್ ಅಭಿನಯದ ಇನ್ಬು ಹೆಸರಿಡಿದ ಚಿತ್ರ, ಬಂಪರ್ ಹಾಗೂ ಮದಗಜ ಸೇರಿ ಇನ್ನೆರಡು ಚಿತ್ರಗಳ ಚಿತ್ರೀಕರಣ ಹಂತದಲ್ಲಿದೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights