ರಾತ್ರೋ ರಾತ್ರಿ ಹಸು ಕಳ್ಳತನಕ್ಕೆ ಬಂದ್ರು : ಮುಂದೇನಾಯ್ತು ವಿಡಿಯೋ ನೋಡಿ…

ರಾತ್ರೋ ರಾತ್ರಿ ಹಸು ಕಳ್ಳತನಕ್ಕೆ ಬಂದ್ರು. ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ರು. ಸಿಕ್ಕಾಪಟ್ಟೆ ಒದೆ ತಿಂದ್ರು.

ಮೈಸೂರಿನ ಕೆ.ಆರ್.ನಗರ ತಾಲ್ಲೂಕಿನ ದಿಡ್ಡಹಳ್ಳಿ ಗ್ರಾಮದಲ್ಲಿ ಹಸು ಕದಿಯಲು ಬಂದ ನಾಲ್ಕು ಹಸು ಕಳ್ಳರನ್ನು ಗ್ರಾಮಸ್ಥರು ಹಿಡಿದು ಸಿಕ್ಕಾಪಟ್ಟೆ ಥಳಿಸಿದ್ದಾರೆ. ಕಳ್ಳರನ್ನು ಹಿಡಿದ ಗ್ರಾಮಸ್ಥರು ಕಳ್ಳರನ್ನು ರಾತ್ರಿಯಿಡಿ ಕಂಬಕ್ಕೆ ಕಟ್ಟಿ ಹಾಕಿ ಬೆಳಗ್ಗೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ಗೂಡ್ಸ್ ಆಟೋದಲ್ಲಿ ಹಸುಗಳನ್ನು ಕದ್ದು ಪರಾರಿಯಾಗುತ್ತಿದ್ದಾಗ ಸಿಕ್ಕಿಬಿದ್ದ 4ಮಂದಿ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಾರೆ. ರಾಮಚಂದ್ರ,ದೇವರಾಜನಾಯಕ, ಚಂದ್ರನಾಯಕ,ಬಿರೇಶ ಸಿಕ್ಕಿಬಿದ್ದ ಹಸುಕಳ್ಳರು.

ಬೆಳಗಿನ ಜಾವ 3.30 ಸಮಯದಲ್ಲಿ ಹಸುಗಳ ಶಬ್ದ ಕೇಳಿ ಎಚ್ಚೆತ್ತ ಗ್ರಾಮಸ್ಥರು, ಗೂಡ್ಸ್ ಆಟೋದಲ್ಲಿ ಪರಾರಿಯಾಗಿತ್ತಿದ್ದವರನ್ನ ಹಿಡಿದು ಆಟೋ ಜಖಂ ಮಾಡಿ, ನಂತರ ಕೆ.ಆರ್.ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಾಮಿಸಿದ ಪೊಲೀಸರು ಹಸುಕಳ್ಳರನ್ನ ವಶಕ್ಕೆ ಪಡೆದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights