ಸಂಜೆ ಹೊತ್ತು ಸೂರ್ಯನಂತೆ ಕೆರೆಯಲ್ಲಿ ಮುಳುಗಿದ ಬಾಲಕರು ತೇಲಿದ್ದು ಹೀಗೆ….

ಸಂಜೆ ಹೊತ್ತು ಸೂರ್ಯನಂತೆ ಕೆರೆಯಲ್ಲಿ ಈಜಲು ಮುಳುಗಿದ ಬಾಲಕರು ಶವವಾಗಿ ತೇಲಿದ ಧಾರುಣ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ತಳೇವಾಡ ಗ್ರಾಮದಲ್ಲಿ ನಡೆದಿದೆ.

ಸುದೀಪ(10) ಮಾಳಪ್ಪ(10) ಸಾವಿಗೀಡಾದ ಬಾಲಕರು. ಈಜಲು ಬಾರದೆ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಕೆರೆಯಲ್ಲಿ ಈಜಲು ಹೋದಾಗ ನಡೆದ ಘಟನೆ ನಡೆದಿದೆ.

ಇಂದು ಶವಗಳು ಪತ್ತೆಯಾಗಿವೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಜಯಪುರ ಜಿಲ್ಲೆಯ ಕೂಡಗಿ ಎನ್ ಟಿ ಪಿ ಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights