ಹಿಮ್ಮುಖ ಚಲನೆ ವೇಳೆ ಬಾಲಕನ ಮೇಲೆ ಹರಿದ ವಾಹನ, ಸ್ಥಳದಲ್ಲೇ ಬಾಲಕ ಸಾವು…

ಹಿಮ್ಮುಖ ಚಲನೆ ವೇಳೆ ಬಾಲಕನ ಮೇಲೆ ಹರಿದ ವಾಹನ, ಸ್ಥಳದಲ್ಲೆ ಬಾಲಕ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೌದು… ಚಾಲಕ ದೊಡ್ಡಪ್ಪನ ನಿರ್ಲಕ್ಷ್ಯ ಮುಗ್ಧ ಬಾಲಕ ಬಲಿಯಾಗಿದ್ದಾನೆ. ತೇಜಸ್ (೦೩)ದೊಡ್ಡಪ್ಪನ ನಿರ್ಲಕ್ಷ್ಯಕ್ಕೆ ಬಲಿಯಾದ ಬಾಲಕ.

ಮನೆಯ ಮುಂದೆ ನಿಲ್ಲಿಸಿದ್ದ ಗೂಡ್ಸ್ ವಾಹನದ ಹಿಂಭಾಗ ಬಹಿರ್ದೆಸೆಗೆ ಕುಳಿತಿದ್ದ ಬಾಲಕನ್ನ ನೋಡದ ಚಾಲಕ ವಾಹನವನ್ನು ಹಿಮ್ಮುಖವಾಗಿ ತೆಗೆಯುವ ವೇಳೆ ದುರ್ಘಟನೆ ನಡೆದಿದೆ. ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights