ಹುಣಸೂರು ಗೆಲ್ಲಲ್ಲು ಸಾಫ್ಟ್ ಆಗಿಯೇ ಜಾತಿ ಕಾರ್ಡ್ ಪ್ಲೇ ಮಾಡಿದ ಹಳ್ಳಿಹಕ್ಕಿ…!
ಕಾಂಗ್ರೆಸ್ ಜೆಡಿಎಸ್ ನಾಯಕರ ಬಗ್ಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಸಾಫ್ಟ್ ಕಾರ್ನರ್ ತೋರಿಸಿದ್ದು ಯಾವ ಕಾರಣಕ್ಕೆ ಅನ್ನೋ ಪ್ರಶ್ನೆ ಏಳುತ್ತಿರುವಂತೆ ಅದಕ್ಕುತ್ತರ ಸಿಕ್ಕಿದ್ದು,ಜಾತಿ ಕಾರ್ಡ್ ಪ್ಲೇ.
ಹೌದು.. ಹುಣಸೂರು ಗೆಲ್ಲಲ್ಲು ಹಳ್ಳಿಹಕ್ಕಿ ಸಾಫ್ಟ್ ಆಗಿಯೇ ಜಾತಿ ಕಾರ್ಡ್ ಪ್ಲೇ ಮಾಡಿದ್ದಾರೆ. ಜಾತಿ ಸಮೀಕರಣದ ಮೂಲಕ ಮತದಾರರನ್ನ ಸೆಳೆಯೋ ತಂತ್ರ ಮಾಡಿದ್ದಾರೆ. ಸಿದ್ದರಾಮಯ್ಯರನ್ನ ಬೈದ್ರೆ ಕುರುಬ ಮತಗಳಿಗೆ ಬಿಳಲಿದೆ ಏಟು.
ಇದೆ ಕಾರಣಕ್ಕೆ ಸಿದ್ದರಾಮಯ್ಯ ಒಬ್ಬ ಉತ್ತಮ ಆಡಳಿತಗಾರ ಎನ್ನುತ್ತಿರುವ ವಿಶ್ವನಾಥ್, ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಸಿದ್ದು ಹೊಗಳಲು ಶುರು ಮಾಡಿದ್ದಾರೆ.
ಇನ್ನೂ ಸಿದ್ದರಾಮಯ್ಯ ಜೊತೆ ದೇವೇಗೌಡರ ಬಗ್ಗೆಯೂ ಮೆಚ್ಚುಗೆ ಸೂಚಿಸಿದ್ದಾರೆ. ಕಾರಣ ಇಷ್ಟೇ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟು ದೇವೇಗೌಡರನ್ನ ದೇವರಿಗೆ ಹೋಲಿಸಿ ಮತಗಳನ್ನ ಪಡೆಯುವ ಮಾಸ್ಟರ್ ಪ್ಲಾನ್.
ಅವರು ನನಗೆ ಅವಕಾಶ ಕೊಟ್ಟರು ಹಾಗಾಗಿ ದೊಡ್ಡಗೌಡರೇ ದೇವರು ಎನ್ನುತ್ತಿದ್ದಾರೆ. ಕುರುಬ ಹಾಗೂ ಒಕ್ಕಲಿಗ ಮತಗಳೆ ಹೆಚ್ಚಾಗಿರುವ ಹುಣಸೂರು ಕ್ಷೇತ್ರದಲ್ಲಿ ಜಾತಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ವಿಶ್ವನಾತ್.
ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಗೆ ತನ್ನ ಸ್ವಂತ ಬಲ ಇಲ್ಲ. ಕಳೆದ ಚುನಾವಣೆಯಲ್ಲಿ ಮೂರನೆ ಸ್ಥಾನಕ್ಕೆ ಕುಸಿದಿದ್ದ ಬಿಜೆಪಿ ಪಕ್ಷವಾಗಿದೆ. ಇದೆ ಕಾರಣಕ್ಕೆ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರನ್ನ ಸೆಳೆಯಲು ಜಾತಿ ತಂತ್ರ ರೂಪಿಸಲಾಗಿದೆ.
ಬಿಜೆಪಿಯಲ್ಲಿ ಆಯಾ ಸಮುದಾಯದ ನಾಯಕರಿಂದ ಪ್ರಚಾರ ಗಿಟ್ಟಿಸಿಕೊಳ್ಳಲಾಗುತ್ತಿದೆ. ಇದೀಗ ಹೆಚ್ಚುಮತಗಳಿರುವ ಸಮಯದಾಯದ ಮಾಸ್ಲೀಡರ್ಗಳ ವಿರುದ್ದ ಸಾಫ್ಟ್ ಪ್ಲಾನ್ ನಡೆಸಲಾಗುತ್ತಿದೆ.