BSY cabinet : ಮಹತ್ವದ ಸುಳಿವು ನೀಡಿದ ಯಡಿಯೂರಪ್ಪ, 15-16 ಶಾಸಕರಿಗೆ ಮಂತ್ರಿಭಾಗ್ಯ…
ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಿರಸ್ ಯಡಿಯೂರಪ್ಪ ಮಹತ್ವದ ಸುಳಿವು ನೀಡಿದ್ದಾರೆ. ತಮ್ಮ ಸರಕಾರದ ಅಸ್ತಿತ್ವಕ್ಕೆ ಕಾರಣರಾದವರು ಮತ್ತು ಪಕ್ಷದ ಹಿರಿಯರು ಈ ಎರಡೂ ಬಣಗಳನ್ನು ಖುಷಿ ಪಡಿಸುವ ನಿಟ್ಟಿನಲ್ಲಿ ಸಿಎಂ ಅಡಿ ಇಟ್ಟಿದ್ದಾರೆ.
ವಿಸ್ತರಣೆ ಸಂದರ್ಭದಲ್ಲಿ 15-16 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಯೋಜನೆ ಇದೆ ಎಂದು ಹೇಳುವ ಮೂಲಕ ಯಡಿಯೂರಪ್ಪನವರು ಆಕಾಂಕ್ಷಿಗಳಲ್ಲಿ ಹೊಸ ಆಸೆ ಹುಟ್ಟಿಸಿದ್ದಾರೆ. ಈ ವಿಸ್ತರಣೆಯಲ್ಲಿಯೇ ಬಹುತೇಕ ಸಂಪುಟ ಪೂರ್ಣಗೊಳಿಸುವುದು ಬಿಎಸ್ವೈ ಲೆಕ್ಕಾಚಾರವಾಗಿದೆ.
ಬಿಎಸ್ವೈ ಅವರ ಈ ಹೇಳಿಕೆಯಿಂದ ಪಕ್ಷಾಂತರಿಗಳು ಹಾಗೂ ಮೂಲ ನಿವಾಸಿಗಳ ಬಣಗಳಲ್ಲಿ ಆಕಾಂಕ್ಷಿಗಳಲ್ಲಿ ಆಸೆ ಚಿಗುರಿದೆ. ಉಪಚುನಾವಣೆಯಲ್ಲಿ ಗೆದ್ದ ಎಲ್ಲ ಪಕ್ಷಾಂತರಿಗಳಿಗೂ ಮಂತ್ರಿ ಸ್ಥಾನ ಸಿಗುವ ಲಕ್ಷಣಗಳು ಕಂಡರೇ ನಾಲ್ಕೈದು ಮಂದಿ ಹಿರಿಯ ಶಾಸಕರನ್ನೂ ಮಂತ್ರಿ ಮಾಡಿ ಸಂಪ್ರೀತಗೊಳಿಸಿವಿದಿ ಬಿಎಸ್ವೈ ಲೆಕ್ಕಾಚಾರವಾಗಿದೆ.
ಉಪಚುನಾವಣೆ ಮುಗಿದು ತಿಂಗಳು ಕಳೆದರೂ ಇನ್ನೂ ಮಂತ್ರಿ ಮಂಡಲ ವಿಸ್ತರಣೆ ಆಗದಿರುವುದು ನಾನಾ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಈಗ ಬಿಎಸ್ವೈ ಹೇಳಿಕೆ ಅವುಗಳಿಗೆ ತೆರೆ ಎಳೆದಿದೆಯಾದರೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮನದಲ್ಲಿ ಏನಿದೆ ಎಂಬುದರ ಮೇಲೆ ಬಿಎಸ್ವೈ ಆಟ ನಡೆಯಲಿದೆ ಎಂಬುದು ಸ್ಪಷ್ಟ.