ಜಾತಿ ಲೆಕ್ಕಾಚಾರ ಹಾಕುವ ಸಿದ್ದರಾಮಯ್ಯ ಎನ್ಆರ್ಸಿ ಯಾಕೆ ವಿರೋಧಿಸುತ್ತಾರೆ – ಸೊಗಡು ಶಿವಣ್ಣ
ಯಾವ್ಯಾವ ಜಾತಿಯವರು ಎಷ್ಟಿದ್ದಾರೆ ಎಂದು ಜಾತಿ ಲೆಕ್ಕಾಚಾರ ಹಾಕುವ ಸಿದ್ದರಾಮಯ್ಯರನವರು ಪ್ರಜೆಗಳ ನೋಂದಣಿ ಮಾಡುವ ಎನ್ ಆರ್.ಸಿಯನ್ನು ಯಾಕೆ ವಿರೋಧಿಸುತ್ತಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸಿದ್ದರಾಮಯ್ಯರ ವಿರುದ್ದ ಹರಿಹಾಯ್ಧಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎನ್ ಆರ್. ಸಿ ನೋಂದಣಿ ಮಾಡಿದರೆ ದೇಶದ ಪ್ರಜೆಗಳಿಗೆ ಉಪಯಕ್ತವಾಗುತ್ತದೆ. ಆದರೆ ಜಾತಿ ಗಣತಿ ಮಾಡಿದರೆ ಏನು ಲಾಭ ಎಂದು ಕಟುಕಿದ್ದಾರೆ. ಭಾರತದ ಮುಸ್ಲಿಮರು ಮೂಲತಃ ಹಿಂದುಗಳೇ ಆಗಿದ್ದಾರೆ. ಮತಾಂತರಗೊಂಡು ಮುಸಲ್ಮಾನರಾಗಿದ್ದಾರೆ. ನಾವೆಲ್ಲಾ ಅಣ್ಣತಮ್ಮರಂತೆ ಇದ್ದೆವೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಗಳು ಸೇರಿ ಬೆಂಕಿ ಇಡುವ ಕೆಲಸ ಮಾಡುತಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆಯಿಂದ ಯಾವ ಮುಸಲ್ಮಾನರಿಗೂ ತೊಂದರೆಯಾಗಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಸೋನಿಯಾ ಗಾಂಧಿ, ತಸ್ಲಿಮಾ ನಸ್ರಿನ್ , ಮಲಾಲಾ ಭಾರತ ಪೌರತ್ವ ನೀಡಿಲ್ವೆ ಎಂದು ಪ್ರಶ್ನಿಸಿದದ್ದಾರೆ. ಶ್ರೀಲಂಕಾ, ನೇಪಾಳದ ಹಿಂದುಗಳು ಯಾಕೆ ಪೌರತ್ವ ಕಾಯಿದೆ ಅಡಿ ಬರಲ್ಲಾ ಅವರು ಹಿಂದುಗಳು ಅಲ್ವಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಸೊಗಡು ಬಳಿ ಉತ್ತರಿಸಲು ತಡವರಿಸಿದರು. ಯಾವುದೇ ತಯಾರಿ ಇಲ್ಲದೆ ಸುದ್ದಿಗೋಷ್ಠಿ ನಡೆಸಿ ಮುಜುಗರಕ್ಕೆ ಒಳಗಾದ್ರು ಎಂದರು.