ಯಾವುದೇ ಇನ್ವಿಟೇಷನ್ ಇಲ್ಲದೇ NRC, CAB ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯ…
ನಿನ್ನೆ ಗಾಂಧಿ ಭವನದಲ್ಲಿ ನಡೆದ NRC, CAB ಕಾರ್ಯಕ್ರಮದಲ್ಲಿ ಯಾವುದೇ ಇನ್ವಿಟೇಷನ್ ಇಲ್ಲದೇ ಇದ್ದರೂ ಕೂಡ ಈ ರಾಜ್ಯದ ಘನವೆತ್ತ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಜರಾಗಿದ್ದು ಆಶ್ಚರ್ಯವನ್ನುಂಟು ಮಾಡಿದೆ.
ತೀರಾ ಜನಸಾಮಾನ್ಯರಂತೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ವೀಕ್ಷಕರ ಸಾಲಲ್ಲಿ ಕುಳಿತು ಎಲ್ಲ ಮಾತುಗಳನ್ನು ಕೇಳಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಂತೆ ” ನನ್ನ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಬಂದೆ ” ಎಂದಿದ್ದಾರೆ.
ಅವರನ್ನು ಆಕಸ್ಮಿಕವಾಗಿ ಕಂಡಾಗ ಎಲ್ಲರ ಹೃದಯವು ಹೇಳಿತು ” ಹೌದು ಹುಲಿಯ ” ಎಂದಿದ್ದಾರೆ.