ಹಾಡು ಹಗಲೇ ಲಾಂಗ್ ಹಿಡಿದು ಬಾರ್ ನಲ್ಲಿ ಬೆದರಿಸಿ ದರೋಡೆ….!
ಹಾಡು ಹಗಲೇ ಲಾಂಗ್ ಹಿಡಿದು ಬಂದ ಬಾರ್ ನಲ್ಲಿ ಬೆದರಿಸಿ ದರೋಡೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಸಮೀಪ ಚಂದಗೋಳಮ್ಮ ದೇವಾಲಯ ಸಮೀಪದ ಬಾರ್ ನಲ್ಲಿ ನಡೆದಿದೆ.
ಬಾರ್ ನಲ್ಲಿ ದರೋಡೆ ನಡೆಸಿದ ವಿಡಿಯೋ ಬಾರ್ ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಜೀಪ್ ನಲ್ಲಿ ಮಾರಕಾಸ್ತ್ರ ಹಿಡಿದು ಬಂದ ಯುವಕನಿಂದ ದರೋಡೆ ಮಾಡಲಾಗಿದೆ.
ಮದ್ಯ ಸೇರಿದಂತೆ ಬಾರ್ ನಲ್ಲಿದ್ದ ನಗದು ದೋಚಿ ತೆರಳಿದ ಯುವಕರು, ಬಾರ್ ನಲ್ಲಿದ್ದ ಸಿಬ್ಬಂದಿಗಳನ್ನು ಬೆದರಿಸಿದ್ದಾರೆ. ಸಿಬ್ಬಂದಿಗಳು ಪ್ರತಿರೋಧ ತೋರಲು ಮುಂದಾದಾಗ ಯುವಕನಿಂದ ಲಾಂಗ್ ನಿಂದ ಹಲ್ಲೆ ಮಾಡಲಾಗಿದೆ. ಲಾಂಗ್ ನಿಂದ ಹಲ್ಲೆ ಗೆ ಮುಂದಾದಾಗ ಬಾರ್ ನ ಸಿಬ್ಬಂದಿಗಳು ಬೆದರಿದ್ದಾರೆ. ನಂತರ ದರೋಡೆ ಮಾಡಿ ದರೋಡೆಕೋರರು ಪರಾರಿಯಾಗಿದ್ದಾರೆ.
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.