ಬಿಜೆಪಿಯವರು ಯಾರು ಏನು ಮಾಡಿದ್ದಾರೆ ಎಂಬುದು ನನಗೂ ಗೊತ್ತಿದೆ – DKಶಿ
ಬಿಜೆಪಿಯವರು ಯಾರು ಏನು ಮಾಡಿದ್ದಾರೆ ಎಂಬುದು ನನಗೂ ಗೊತ್ತಿದೆ. ಅವರ ಪುರಾಣ ಬಿಚ್ಚಲಾ? ಹೀಗೆಂದು ಹೇಳಿದ್ದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್.
ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ ಬಳಿ 25 ಲಕ್ಷ ರೂ ಹಣ ಸಿಕ್ಕಿರುವ ವಿಷಯವಾಗಿ ಪ್ರತಿಭಟನೆಗೆ ಇಳಿದಿರುವ ಬಿಜೆಪಿ ಕುರಿತು ಸಚಿವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಯಾವನೋ ಒಬ್ಬ ವ್ಯಕ್ತಿ ಗಾಡೀಲಿ ದುಡ್ಡು ಇಟ್ಟುಕೊಂಡರೆ ಇದಕ್ಕೂ ಪುಟ್ಟರಂಗ ಶೆಟ್ಟಿಗೂ ಸಂಬಂಧ ಕಲ್ಪಿಸೋಕೆ ಆಗಲ್ಲ. ಇದಕ್ಕೆ ಶೆಟ್ಟಿ ರಾಜೀನಾಮೆ ಯಾಕೆ ಕೊಡಬೇಕು. ಅದರ ಅವಶ್ಯಕತೆಯಾದರೂ ಏನಿದೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಎಲ್ಲದಕ್ಕೂ ರಾಜೀನಾಮೆ ಕೇಳುತ್ತಾರೆ. ಹಾಗೆ ಮಾಡುವಾಗ ಅವರಿಗೆ ತಮ್ಮ ಹುಳುಕು ಕಾಣುವುದಿಲ್ಲ. ಅವರ ಪುರಾಣವನ್ನು ನಾನು ಬಿಚ್ಚಲಾ ಎಂದು ಡಿಕೆಶಿ ಹೇಳಿದ್ದಾರೆ.
ಸಚಿವ ಶೆಟ್ಟಿ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದೆ. ನಾನು ಅವರ ಕರ್ಮಕಾಂಡದ ವಿವರಗಳನ್ನು ಬಿಚ್ಚಡಲಾ ಎಂದಿದ್ದಾರೆ.
ಈ ಹಿಂದೆ ಕೋಟಿ ಹಣ ಸಿಕ್ಕಿತ್ತು, ಅದು ಏನಾಯ್ತು? ಯಾರದು ಹಣ? ಚೆಕ್ನಲ್ಲಿ ದುಡ್ಡು ತೆಗೆದುಕೊಂಡಿದ್ದು ಯಾರಿಗೂ ಗೊತ್ತಾಗಲ್ಲ ಅಂದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.
ನಾನು ಆಟ ಶುರು ಮಾಡಿದ್ರೆ ಇವರೆಲ್ಲ ಎಲ್ಲ ಹೋಗ್ತಾರೆ. ಎಲ್ಲದಕ್ಕೂ ಸಮಯ ಬರಲಿ ಎಂದು ಕಾಯುತ್ತಿದ್ದೇನೆ ಎಂದು ಡಿಕೆಶಿ ಎಚ್ಚರಿಸಿದರು.