ಚಿರು ಕಟೌಂಟ್ ಪಕ್ಕದಲ್ಲಿಟ್ಟು, ಸೀಮಂತ ಆಚರಿಸಿಕೊಂಡ ಮೇಘನಾ ರಾಜ್!
ನಟಿ ಮೇಘನಾ ರಾಜ್ ಅವರಿಗೆ ಇಂದು ಸೀಮಂತ ಕಾರ್ಯ ನೆರವೇರಿಸಲಾಗಿದೆ. ಚಿಕ್ಕ ವಯಸ್ಸಿಗೆ ಸಾವನ್ನಪ್ಪಿದ್ದ ತಮ್ಮ ಗಂಡ ನಟ ಚಿರು ನೆನಪಿನಲ್ಲಿಯೇ ಮೇಘನಾ ಸೀಮಂತ ಮಾಡಿಕೊಂಡಿದ್ದಾರೆ.
ಚಿರು ಅಗಲುವಿಕೆಯ ನೋವಿನಲ್ಲೇ ಸೀಮಂತ ಕಾರ್ಯ ನೆರವೇರಿದ್ದು, ಚಿರಂಜೀವಿ ಸರ್ಜಾ ಅವರ ಕಟೌಟ್ಅನ್ನು ಮೇಘನಾರ ಪಕ್ಕದಲ್ಲಿ ಇರಿಸಿ ಸೀಮಂತ ಕಾರ್ಯ ನೆರವೇರಿಸಲಾಗಿದೆ.
ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯ ಇಂದು ಎರಡೂ ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ನೆರವೇರಿದೆ. ಕೊರೊನಾ ಹಿನ್ನೆಲೆ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ.
ಚಿರಂಜೀವಿ ಸರ್ಜಾ ಅಕಾಲಿಕ ನಿಧನದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಕುಟುಂಬದವರು ಮೇಘನಾ ಸೀಮಂತ ಕಾರ್ಯ ನೆರವೇರಿಸಿದ್ದಾರೆ.
ಇದನ್ನೂ ಓದಿ: ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ಕಾಂಗ್ರೆಸ್ ಸೇರ್ಪಡೆ: RRನಗರದಲ್ಲಿ ಸ್ಪರ್ಧಿಸುವ ಸಾಧ್ಯತೆ!