ಇಂದಿರಾಗಾಂಧಿಗಿಂತ ಘೋರವಾಗಿ ಪ್ರಧಾನಿ ಮೋದಿ ಸಾಯುತ್ತಾರೆ: ಬ್ರಹ್ಮಾಂಡ ಗುರೂಜಿ

ಬಾಯಿಗೆ ಬಂದತೆ ಮಾತನಾಡುವ ಮೂಲಕ ಯಾವಾಗಲೂ ವಿವಾದ ಸೃಷ್ಟಿಸಿಕೊಂಡು ಬುರುಡೆ ಸ್ವಾಮೀಜಿ ಎಂದು ಕರೆಯಲ್ಪಡುವ, ಬ್ರಹ್ಮಾಂಡ ಗುರೂಜಿ ಎಂದೆನಿಸಿಕೊಂಡಿರುವ ನರೇಂದ್ರ ಬಾಬು ಶರ್ಮಾ ಇದೀಗ ಮತ್ತೇ ವಿವಾದವನ್ನು ಮೈಗೆಳಿದುಕೊಂಡಿದ್ದಾರೆ. ಹಾಸನಾಂಬ ದೇವಿಯ ದರ್ಶನ ಪಡೆಯಲು ಬಂದಿದ್ದ ಅವರು, ”ಇಂದಿರಾ ಗಾಂಧಿಗಿಂತಲೂ ಘೋರವಾಗಿ ಪ್ರಧಾನಿ ನರೇಂದ್ರ ಮೋದಿ ಸಾವನ್ನಪ್ಪಬಹುದು” ಎಂದು ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿ ಮೋದಿ ಇನ್ನಾದರೂ ತಾಯಿ ಅಥವಾ ಪತ್ನಿಯೊಂದಿಗೆ ಇರಬೇಕು. ಪ್ರಧಾನಿಯ ರಕ್ಷಣೆಗಾಗಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಇಲ್ಲವಾದರೆ ಅಪಾಯವಿದೆ. ಮುಂದಿನ ಬಾರಿ ಅವರು ಪ್ರಧಾನಿಯಾಗಬೇಕು ಎಂದು ಬಯಸಿದರೂ ಅವರನ್ನು ಪ್ರಧಾನಿ ಮಾಡಲು ಅವರ ಪಕ್ಷದವರೇ ಒಪ್ಪುವುದಿಲ್ಲ. ಸ್ವಪಕ್ಷೀಯರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬಾರದೆಂದು ಸಂಚು ರೂಪಿಸಿದ್ದಾರೆ” ಎಂದರು.

ಇದನ್ನೂ ಓದಿ: ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಯುವಜನರು: ಕಾರಣ – ಆರ್ಥಿಕತೆ ಮತ್ತು ಸಿದ್ದಾಂತ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆಯೂ ಮಾತನಾಡಿದ ಅವರು, ”ಮುಂದಿನ ವರ್ಷ ಸಿಎಂ ಬದಲಾವಣೆ ಆಗಲಿದ್ದು, ಇನ್ನೂ ಮೂವರು ಮುಖ್ಯಮಂತ್ರಿಗಳು ಬರುವುದರೊಳಗೆ ಕರ್ನಾಟಕ ಇಬ್ಭಾಗ ಆಗುತ್ತೆ. ಕರ್ನಾಟಕವು ಆಂಧ್ರ ತೆಲಂಗಾಣದಂತೆ ಒಡೆದು, ಬೆಳಗಾವಿ ಉತ್ತರ ಕರ್ನಾಟಕದ ಕೇಂದ್ರವಾದರೆ, ಬೆಂಗಳೂರು ದಕ್ಷಿಣದ ರಾಜಧಾನಿಯಾಗಿರುತ್ತದೆ. ಮೂರನೇ ಮಹಾಯುದ್ಧ ಕೂಡಾ ನಡೆಯುತ್ತೆ. ಭಾರತದ 6 ಮಂದಿ ವಿದೇಶದಲ್ಲೂ ಆಳ್ವಿಕೆ ನಡೆಸುತ್ತಾರೆ” ಎಂದು ಹೇಳಿದರು.

“ಮೋದಿಯ ಅವಧಿ ಕೂಡ ಮುಕ್ತಾಯವಾಗುತ್ತದೆ. ಮುಂದಿನ 13 ವರ್ಷಗಳ ಕಾಲ ದೇಶದಲ್ಲಿ ಆಹಾರದ ಕೊರತೆ ಉಂಟಾಗಿ ಹಸಿವಿನ ಕ್ಷಾಮ ತಲೆದೋರಲಿದೆ. ಹೀಗಾಗಿ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮುಂದಾದರೂ ಭ್ರಷ್ಟಾಚಾರ ಬಿಟ್ಟು ಧರ್ಮ ಮಾರ್ಗದಲ್ಲಿ ನಡೆಯಬೇಕು” ಎಂದು ಹೇಳಿದರು.


ಇದನ್ನೂ ಓದಿ: ಸುಲಭ ಉದ್ಯಮಕ್ಕೆ ಅವಕಾಶ ನೀಡುತ್ತೇವೆ; ಜೀವನವನ್ನು ಸುಗಮಗೊಳಿಸಿ: ಪ್ರಧಾನಿ ಮೋದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights