ತೃಪ್ತಿ ದೇಸಾಯಿ ಸಬರಿಮಲೆ ಭೇಟಿಯ ಹಿಂದೆ ಬಿಜೆಪಿ ಪಾತ್ರವಿದೆ ಎಂಬ ವರದಿಗಳು ನಕಲಿ..

ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರು ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರಯತ್ನಗಳು 2018 ಮತ್ತು 2019 ರಲ್ಲಿ ರಾಷ್ಟ್ರೀಯ ಗಮನ ಸೆಳೆದಿವೆ. ಮುಟ್ಟಿನ ವಯಸ್ಸಿನ ಮಹಿಳೆಯರಿಗೆ 2018 ರವರೆಗೆ ಸಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿರಲಿಲ್ಲ.

ಮನೋರಮಾ ಆನ್‌ಲೈನ್ ಹೆಸರಿನಲ್ಲಿನ ಸ್ಕ್ರೀನ್‌ಶಾಟ್ ಒಂದು ಭಾರೀ ವೈರಲ್ ಆಗುತ್ತಿದೆ. ‘ಬಿಜೆಪಿಯ ಕೇರಳ ರಾಜ್ಯ ಉಪಾಧ್ಯಕ್ಷ ಶೋಭಾ ಎಸ್, ರಾಜ್ಯದ ಪಕ್ಷದ ಅಧ್ಯಕ್ಷ ಕೆ ಸುರೇಂದ್ರನ್ ಅವರು ಸಬರಿಮಲೆಗೆ ಪ್ರವೇಶಿಸಲು ದೇಸಾಯಿ ಮಾಡಿದ ಪ್ರಯತ್ನದ ಹಿಂದಿನ ಸೂತ್ರಧಾರಿ ಬಿಜೆಪಿ ಎಂದು ಹೇಳಿದ್ದಾರೆ’ ಎಂದು ಬರೆದ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಮನೋರಮಾ ಆನ್‌ಲೈನ್ ಮಲಯಾಳಂ ದೈನಂದಿನ ಡಿಜಿಟಲ್ ವಿಭಾಗವಾಗಿದೆ.

ಸ್ಕ್ರೀನ್‌ಶಾಟ್‌ನ ಶೀರ್ಷಿಕೆಯಲ್ಲಿ “ಕೆ.ಸುರೇಂದ್ರನ್‌ರ ಸೂಚನೆಯಂತೆ ತೃಪ್ತಿ ದೇಸಾಯಿ ಸಬರಿಮಲೆಗೆ ಭೇಟಿ ನೀಡಿದರು: ಶೋಭಾ ಸುರೇಂದ್ರನ್” ಎಂದು ಬರೆಯಲಾಗಿದೆ.

ಆದರೆ ವೈರಲ್ ಸ್ಕ್ರೀನ್‌ಶಾಟ್ ಮಾರ್ಫಿಂಗ್ ಆಗಿದ್ದು, ಬಿಜೆಪಿಯ ಕೇರಳ ಉಪಾಧ್ಯಕ್ಷ ಶೋಭಾ ಎಸ್ ಈ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ. ಸಬರಿಮಾಲಾ ವಿಷಯದಲ್ಲಿ ತಾನು ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದಿದ್ದಾರೆ. ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೇರಳ ತಯಾರಿ ನಡೆಸುತ್ತಿರುವ ಸಮಯದಲ್ಲಿ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.

ಇದೇ ರೀತಿಯ ಪೋಸ್ಟ್‌ಗಳನ್ನು (http://archive.today/acjTk) ಇಲ್ಲಿ ನೋಡಬಹುದು.

ತನಿಖೆ

ಮನೋರಮಾ ಆನ್‌ಲೈನ್ ಅಥವಾ ಶೋಭಾ ಅವರ ಯಾವುದೇ ಮಾಧ್ಯಮ ಸಂಸ್ಥೆಯಲ್ಲಿ ಬಿಜೆಪಿ ಅಥವಾ ಅದರ ಯಾವುದೇ ನಾಯಕರು ಸಬರಿಮಲೆಗೆ ಭೇಟಿ ನೀಡುವ ದೇಸಾಯಿ ಪ್ರಯತ್ನದ ಹಿಂದೆ ಇದ್ದಾರೆ ಎಂಬ ಹೇಳಿಕೆ ಯಾವುದೇ ವರದಿಯನ್ನು ಕಂಡುಬಂದಿಲ್ಲ.

ವೈರಲ್ ಸ್ಕ್ರೀನ್‌ಶಾಟ್ ಅನ್ನು ಮನೋರಮಾ ಆನ್‌ಲೈನ್‌ನ ಇತರ ಪ್ರಕಟಿತ ಲೇಖನಗಳೊಂದಿಗೆ ಹೋಲಿಸಿದಾಗ, ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಡೇಟ್‌ಲೈನ್‌ನ ಸ್ವರೂಪದಲ್ಲಿ ಸ್ಪಷ್ಟವಾದ ಅಸಮಾನತೆಯನ್ನು ಕಾಣಬಹುದು.

ವೈರಲ್ ಸ್ಕ್ರೀನ್‌ಶಾಟ್‌ನ ಹೋಲಿಕೆ ಮತ್ತು ಮನೋರಮಾ ಆನ್‌ಲೈನ್ ಪ್ರಕಟಿಸಿದ ಮೂಲ ಲೇಖನದ ಮಾದರಿ ಇಲ್ಲಿದೆ.

ಮಾತ್ರವಲ್ಲದೇ ಈ ವೈರಲ್ ಫೋಟೋ ಬಗ್ಗೆ ಮಾತನಾಡಿದ ಮನೋರಮಾ ಆನ್‌ಲೈನ್‌ನ ಸಂಯೋಜಕ ಸಂಪಾದಕ ಸಂತೋಷ್ ಜಾರ್ಜ್ ಜಾಕೋಬ್ ಅವರು ವೈರಲ್ ಸ್ಕ್ರೀನ್‌ಶಾಟ್ ನಕಲಿ ಎಂದು ದೃಢಪಡಿಸಿದ್ದಾರೆ.

“ವೈರಲ್ ಸ್ಕ್ರೀನ್‌ಶಾಟ್ ನಕಲಿ. ನಾವು ಅಂತಹ ಯಾವುದೇ ಲೇಖನವನ್ನು ಪ್ರಕಟಿಸಿಲ್ಲ ಮತ್ತು ಬಿಜೆಪಿಯ ರಾಜ್ಯ ಉಪಾಧ್ಯಕ್ಷರು ಅಂತಹ ಹೇಳಿಕೆ ನೀಡಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಅನೇಕ ನಕಲಿ ಸ್ಕ್ರೀನ್‌ಶಾಟ್‌ಗಳು ಮಲಯಾಳ ಮನೋರಮಾ ಹೆಸರಿನಲ್ಲಿ ಪ್ರಸಾರವಾಗುತ್ತಿವೆ. ಇದನ್ನು ಕಾನೂನುಬದ್ಧವಾಗಿ ತೆಗೆದುಕೊಳ್ಳಲು ನಾವು ನಿರ್ಧರಿಸಿದ್ದೇವೆ ”ಎಂದು ಸಂತೋಷ್ ತಿಳಿಸಿದ್ದಾರೆ. ಈ ಬಗ್ಗೆ ಅಧಿಕೃತ ಸ್ಪಷ್ಟೀಕರಣ ಟಿಪ್ಪಣಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ.

“ನಾನು ಎಂದಿಗೂ ಶಬರಿಮಳ ವಿಷಯದಲ್ಲಿ ಅಂತಹ ಹೇಳಿಕೆ ನೀಡಿಲ್ಲ. ಸ್ಕ್ರೀನ್‌ಶಾಟ್ ನಕಲಿ ಎಂದು ಮನೋರಮಾ ಕೂಡ ನನಗೆ ದೃಢಪಡಿಸಿದ್ದಾರೆ ಮತ್ತು ಅವರು ಅಂತಹ ಲೇಖನವನ್ನು ಪ್ರಕಟಿಸಿಲ್ಲ. ಈ ಕುರಿತು ಕಾನೂನು ಕ್ರಮ ಜರುಗಿಸಲು ಒತ್ತಾಯಿಸಲು ನಾವು ನಿರ್ಧರಿಸಿದ್ದೇವೆ ”ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟೀಕರಣವನ್ನು ಶೋಭಾ ಮತ್ತು ಬಿಜೆಪಿಯ ಕೇರಳ ವಿಭಾಗದ ಪರಿಶೀಲಿಸಿದ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights