”ಗೂಂಡಾರಾಜ್ ಬೆಂಬಲಿಸುವ ಪೊಲೀಸರು ಬೂಟು ನೆಕ್ಕಲಿ”: ಬಿಜೆಪಿ ಮುಖಂಡ ರಾಜು ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ರಾಜು ನಾಲಿಗೆ ಹರಿಬಿಟ್ಟಿದ್ದು, ‘ಗೂಂಡಾರಾಜ್ ಬೆಂಬಲಿಸುವ ಪೊಲೀಸರನ್ನು ಬೂಟು ನೆಕ್ಕುವಂತೆ ಮಾಡುತ್ತೇವೆ’ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮಾತ್ರವಲ್ಲದೇ ಪಶ್ಚಿಮ ಬಂಗಾಳದ ಆಡಳಿತರೂಢ ಸರ್ಕಾರಕ್ಕೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಮಾತ್ರವಲ್ಲದೇ ಗೂಂಡಾರಾಜ್ ಪರವಾಗಿ ಕೆಲಸ ಮಾಡುವ ಪೊಲೀಸ್ ಇಲಾಖೆಗೆ ತಕ್ಕಶಾಸ್ತಿ ಮಾಡಲು ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದಿದ್ದಾರೆ.

ಹೌದು… ದುರ್ಗಾಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜು ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಗೂಂಡಾರಾಜ್ ಇದ್ದರೂ ಪೊಲೀಸರು ಜನ ಸಾಮಾನ್ಯರಿಗೆ ಯಾವುದೇ ನೆರವು ನೀಡುತ್ತಿಲ್ಲ. ಗೂಂಡಾರಾಜ್ ಇದ್ದರೂ ಪೊಲೀಸರು ಜನ ಸಾಮಾನ್ಯರಿಗೆ ಯಾವುದೇ ನೆರವು ನೀಡುತ್ತಿಲ್ಲ. ಗೂಂಡಾರಾಜ್ ಬೆಂಬಲಿಸುವ ಅಸಮರ್ಥ ಪೊಲೀಸರಿಗೆ ಏನು ಮಾಡಬೇಕು, ನಾವಾದರೆ ಅವರಿಗೆ ಬೂಟು ನೆಕ್ಕುವಂತೆ ಮಾಡುತ್ತೇವೆ. ತಲೆ ತಗ್ಗಿಸಿ ಕರ್ತವ್ಯ ನಿಭಾಯಿಸುವ ಪಾಠ ಕಲಿಸುತ್ತೇವೆ ಎಂದಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಪೊಲೀಸ್ ಇಲಾಖೆ ಇದ್ದು ಸತ್ತ ಹಾಗೆ. ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಕೂಡಾ ಛಾಟಿ ಬೀಸಿದರು. ಇನ್ನೂ ದೇಶಕ್ಕೆ ಒಂದು ಕಾನೂನು ಅನ್ವಯವಾದರೆ, ಇಲ್ಲಿ ಟಿಎಂಸಿ ಕಾನೂನು ಮಾತ್ರ ಜಾರಿಯಲ್ಲಿದೆ. ಮಹಿಳಾ ಸಿಎಂ ಹೊಂದಿದ್ದರೂ ಮಹಿಳೆಯರಿಗೆ ಯಾವುದೇ ಭದ್ರತೆ ಒದಗಿಸುತ್ತಿಲ್ಲ ಎಂಬುದು ದುರಂತ ಎಂದರು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಮಹಿಳೆಯರ ವಿರುದ್ಧ ದೌರ್ಜನ್ಯದಲ್ಲಿ ಬೆಂಗಾಳ ಮುಂದಿದೆ. ಕಾನೂನು ಮತ್ತು ಸುವ್ಯವಸ್ಥೆ ಬದಲಾಗಬೇಕಾದರೆ, ಸರ್ಕಾರ ಮೊದಲಿಗೆ ಬದಲಾಗಬೇಕು ಎಂದು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights