ಪಾರ್ಟಿ ಪ್ರೀಯರೇ ಇತ್ತ ಗಮನಿ : ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿಲ್ಲ…!

ಪಾರ್ಟಿ ಪ್ರೀಯರೇ ಇತ್ತ ಗಮನಿಸಿ. ಹೊಸ ವರ್ಷಕ್ಕೆ ಪ್ಲಾನ್ ಮಾಡುವವರೆಲ್ಲರಿಗೂ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಇದನ್ನು ಮೀರಿದರೆ ಕ್ರಮ ತೆಗೆದುಕೊಳ್ಳುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಹೌದು.. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆ ಮಾಡುವಾಗ ಜನ ಒಂದೆಡೆ ಸೇರಿ ಸಂಭ್ರಮ ಪಡುವುದು ಕಾಮನ್. ಅದ್ರಲ್ಲೂ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಶೀಟ್ ಗಳಲ್ಲಿ ಜನ ಸೇರಿ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಆದರೆ ಈ ಬಾರಿ ಕೊರೊನಾ 2ನೇ ಅಲೆ ಶುರುವಾಗಿರುವುದರಿಂದ ಯಾವುದೇ ಸ್ಥಳಗಳಲ್ಲಿ ಜನ ಸೇರಲು ಅವಕಾಶ ಇಲ್ಲ.

ಮಿಡ್ ನೈಟ್ ನಲ್ಲಿ ಜನ ಸೇರಲು ಅವಕಾಶ ಇಲ್ಲವೇ ಇಲ್ಲ ಎಂದಿದೆ ಬಿಬಿಎಂಪಿ. ಹೀಗಾಗಿ ಎಂ.ಜಿ ರೋಡ್, ಚರ್ಚ್ ಶೀಟ್ ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಈ ಸ್ಥಳಗಳಲ್ಲಿ ಜನ ಸೇರಲು ಅವಕಾಶವಿಲ್ಲ. ಮಾತ್ರವಲ್ಲದೇ ಪಬ್ ಬಾರ್ ರೆಸ್ಟೋರೆಂಟ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರುವಂತಿಲ್ಲ. ಕಡಿಮೆ ಸಂಖ್ಯೆಯಲ್ಲಿ ಮಾತ್ರ ಜನ ಸೇರಿ ಆಚರಿಸಬೇಕು. ಇದಕ್ಕೆ ಬಿಬಿಎಂಪಿ ಕೆಲ ಕೊರೊನಾ ಮಾರ್ಗ ಸೂಚಿಗಳನ್ನು ಕೊಟ್ಟಿದ್ದು, ಬಾರ್, ಪಬ್, ರೆಸ್ಟೋರೆಂಟ್ ಗಳಲ್ಲಿ ಮಾಲೀಕರು ಪಾಲಿಸಲೇಬೇಕು.  ಮಾರ್ಗಸೂಚಿಗಳ ಪ್ರಕಾರ ಜನ ಕೂಡ ನಡೆದುಕೊಳ್ಳಬೇಕು.

ಕೊರೊನಾ ಪ್ರೋಟೋಕಾಲ್ ಇಟ್ಟುಕೊಂಡು ಮಾಲೀಕರು ಸಂಭ್ರಮಾಚರಣೆಗೆ ಅವಕಾಶ ಕೊಡಬೇಕು. ಒಂದು ವೇಳೆ ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಕಮಲ್ ಪಂತ್ ಎಚ್ಚರಿಕೆ ಕೊಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights