ದೆಹಲಿಯಲ್ಲಿ ರೈತರ ಧರಣಿಗೆ ಬೆಂಬಲಿಸಿ ಸಿಲಿಕಾನ್ ಸಿಟಿಯಲ್ಲಿಂದು ಮತ್ತೆ ಅನ್ನದಾತರ ಪ್ರತಿಭಟನೆ..!
ಸಿಲಿಕಾನ್ ಸಿಟಿಯಲ್ಲಿಂದು ಮತ್ತೆ ರೈತರು ಪ್ರತಿಭಟನೆಗೆ ಮುಂದಾಗಿದ್ದು ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಈ ಧರಿಣಿ ಕೈಗೊಂಡಿದ್ದಾರೆ.
ಇಂದಿನಿಂದ ಡಿಸೆಂಬರ್ 31ರವರೆಗೆ ಮೌರ್ಯ ಸರ್ಕಲ್ ನಲ್ಲಿ ಧರಣಿ ನಡೆಸಲಾಗುತ್ತಿದ್ದು, ನವದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರೋ ಪ್ರತಿಭಟನೆಗೆ ಬೆಂಬಲ ಸೂಚಿಸಿ ಈ ಪ್ರೋಟೆಸ್ಟ್ ಮಾಡಲಾಗುತ್ತಿದೆ. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ, ರಾಜ್ಯ ದಲಿತ, ಕಾರ್ಮಿಕ, ರೈತ ಐಕ್ಯ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯಲ್ಲಿ ಸಾಹಿತಿ ದೇವನೂರು ಮಹದೇವಪ್ಪ ಸೇರಿದಂತೆ ವಿವಿಧ ಸಂಘನೆಗಳ ಮುಖಂಡರುಗಳು ಭಾಗಿಯಾಗಲಿದ್ದಾರೆ. ಈ ಬಗ್ಗೆ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಲೀಟ್ ಮಾತನಾಡಿ, ರಾಜ್ಯ ದಲಿತ, ಕಾರ್ಮಿಕ, ರೈತ ಐಕ್ಯ ಹೋರಾಟ ಸಮಿತಿಯ 25 ಮಂದಿಯ ನಿಯೋಗ ನವದೆಹಲಿಗೆ ತೆರಳಿದ್ದು, 25 ಹಾಗೂ 26 ರಂದು ದೆಹಲಿಯಲ್ಲಿ ರೈತರು ನಡೆಸುತ್ತಿರೋ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.