ಜನರನ್ನು ಪ್ರಯೋಗಾಲಯದ ಇಲಿಗಳನ್ನಾಗಿಸಬೇಡಿ; ಲಸಿಕೆಯ ಸತ್ಯಾಸತ್ಯತೆ ತಿಳಿಸಿ: ಜಾರ್ಖಂಡ್‌ ಆರೋಗ್ಯ ಸಚಿವ

ಜನವರಿ 16ರಿಂದ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬೆನ್ನಲ್ಲೇ ಭಾರೀ ಟೀಕೆಗಳು, ಪ್ರಶ್ನೆಗಳು ವ್ಯಕ್ತವಾಗುತ್ತಿವೆ. ಲಸಿಕೆ ಕುರಿತು ಪ್ರಶ್ನಿಸಿರುವ ಜಾರ್ಖಂಡ್‌ ಆರೋಗ್ಯ ಸಚಿವ ಬನ್ನಾ ಗುಪ್ತಾ, ಜನರನ್ನು ಪ್ರಯೋಗಾಯಲದ ಇಲಿಗಳನ್ನಾಗಿ ಮಾಡಬೇಡಿ, ಕೋವಿಕ್-19 ಲಸಿಕೆಯ ಸತ್ಯಾಸತ್ಯತೆಯನ್ನು ತಿಳಿಸಿದೆ ಎಂದು ಕೇಳಿದ್ದಾರೆ.

“ನಾನು ಕೆಲವು ಮಿತಿಗಳನ್ನು ಹೊಂದಿರುವುದರಿಂದ ಹೆಚ್ಚು ಹೇಳುವುದಿಲ್ಲ. ಆದರೆ ಕೇಂದ್ರವು ಯಾವುದೇ ಲಸಿಕೆ ನೀಡುವ ಮೊದಲು, ಸರಿಯಾದ ಪ್ರಾಯೋಗಿಕ ಪರೀಕ್ಷೆ ನಡೆಸುವುದರ ಜೊತೆಗೆ ಅದರ ಸತ್ಯಾಸತ್ಯತೆ, ಪ್ರಸ್ತುತತೆ ಮತ್ತು ಉಪಯುಕ್ತತೆಯನ್ನು ಪರಿಶೀಲಿಸಬೇಕು ಎಂದು ನಾನು ಹೇಳುತ್ತೇನೆ ಎಂದಿದ್ದಾರೆ.

ಈ ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಇರುವುದರಿಂದ ಕೇಂದ್ರ ಮತ್ತು ರಾಜ್ಯಗಳಲ್ಲಿನ ಆಡಳಿತ ಪಕ್ಷಗಳು ಒಂದೇ ಆಗಿರುವುದಿಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರವು ಯಾವುದೇ ರಾಜಕೀಯ ದ್ವೇಷವಿಲ್ಲದೆ ಕೇಂದ್ರದ ಪರವಾಗಿ ನಿಲ್ಲುತ್ತದೆ ಎಂದೂ ಅವರು ಹೇಳಿದ್ದಾರೆ.


ಇದನ್ನೂ ಓದಿ: ಹೃದಯ ಕಲಕಿದ ಘಟನೆ: 3 ಮಕ್ಕಳನ್ನು ಕಳೆದುಕೊಂಡಿದ್ದ ದಂಪತಿಗಳ 4ನೇ ಮಗುವೂ ದುರಂತ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights