ಯಾವ್‌ ನನ್‌ಮಗನಾದ್ರು ಬಂದು ಕೇಳಿದ್ದೀರಾ: ರೈತರ ವಿರುದ್ಧ ನಾಲಿಗೆ ಹರಿಬಿಟ್ಟ ಸಚಿವ ಮಾಧುಸ್ವಾಮಿ

ಅಧಿಕಾರಿಯೊಬ್ಬರನ್ನು ಕೀಳುಭಾಷೆಯಲ್ಲಿ ನಿಂದಿಸಿದ್ದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಇದೀಗ ರೈತರ ವಿರುದ್ಧ ದರ್ಪದ ಮಾತುಗಳನ್ನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯಾವನಾದ್ರು ಬೋಸುಡಿಕೆ ನನ್‌ಮಗನಾದ್ರು ಬಂದು ನನ್ನ ಕೇಳಿದ್ದೀರಾ? ಎಂದು ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕರಿಸಿದ್ದ ಗ್ರಾಮಸ್ಥರ ವಿರುದ್ಧ ಸಂಸದೀಯ ವ್ಯವಹಾರಗಳ ಸಚಿವರೆಂಬುದನ್ನು ಮರೆತು ಮಾಧುಸ್ವಾಮಿ ಅತ್ಯಂತ ಲಘು ಮತ್ತು ಬೇಜವಾಬ್ದಾರಿಯಿಂದ ಮಾತನಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶಿರಾ ತಾಲೂಕು ಗೋಪಾಲದೇವರಹಳ್ಳಿಯ ಗ್ರಾಮಸ್ಥರು ಹೇಮಾವತಿ ನಾಲೆಯಿಂದ ಕುಡಿಯುವ ನೀರು ಹರಿಸಲು ಕೇಳಿರುವುದಕ್ಕೆ ಸಚಿವರು ಗ್ರಾಮಸ್ಥರ ಎದುರೆ ತಾನೊಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಎಂಬುದನ್ನು ಮರೆತು ವರ್ತಿಸಿದ್ದಕ್ಕೆ ಜನರು ಅಲ್ಲಿಂದ ಹೊರಟು ಹೋಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಗೋಪಾಲದೇವರಹಳ್ಳಿ ಗ್ರಾಮಸ್ಥರು ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೂ ಗಮನಕ್ಕೆ ಹಾಕಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕರಿಸಿದ್ದರು.

ಇದನ್ನೂ ಓದಿ: ಅಮಿತ್‌ ಶಾ ಭಾಗಿಯಾಗಿದ್ದ ಭದ್ರಾವತಿ RAF ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕನ್ನಡವೇ ಇಲ್ಲ; ಹೆಚ್‌ಡಿಕೆ ಕಿಡಿ

ಚುನಾವಣೆ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ಗೋಪಾಲದೇವರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಚುನಾವಣೆ ಬಹಿಷ್ಕರಿಸಿದ್ದಕ್ಕೆ ಸಿಟ್ಟಿಗೆದ್ದ ಮಾಧುಸ್ವಾಮಿ ಜನರ ಸಮ್ಮುಖದಲ್ಲೇ, ”ಯಾವನಾದ್ರೂ ಬೋಸುಡಿಕೆ ನನ್ನ ಕೇಳಿದ್ದೀರಾ, ನೋಡೋಣ ಯಾರ್ ಕೈಯಲ್ಲಿ ನೀರು ಬಿಡುಸ್ತ್ಯೋ” ಎಂದು ಪ್ರಶ್ನಿಸಿದ್ದಾರೆ. ಈ ಮಾತು ಕೇಳಿದ ಗ್ರಾಮಸ್ಥದ ಕೆಲವರು, “ಈಯಪ್ಪನತ್ರ ಬೋಸುಡಿಕೆ ಅನ್ನಿಸಿಕೊಳ್ಳಬೇಕಾ” ಎಂದು ಬೈದುಕೊಂಡು ಜಾಗ ಖಾಲಿ ಮಾಡಿದರೆಂದು ಹೇಳಲಾಗಿದೆ.

ಹೇಮಾವತಿ ನೀರು ಬೇಕೆಂದು ಕೇಳಿದ್ದಕ್ಕೆ ಸಚಿವರಿಂದ ಬೈಗುಳ ಕೇಳಬೇಕಾಗಿ ಬಂತಲ್ಲ ಎಂದು ಗ್ರಾಮಸ್ಥರು ಅಸಮಾಧಾನ ತೋಡಿಕೊಂಡಿದ್ದಾರೆ. ಶೇಷನಹಳ್ಳಿ ಕೆರೆ ದೊಡ್ಡ ಅಗ್ರಹಾರ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕು ಅಂತಾ ರೈತರು ಒತ್ತಾಯಿಸಿದ್ದರು.

ಉಪಚುನಾವಣೆಯ ಸಂದರ್ಭದಲ್ಲಿ ಶಿರಾ ಮದಲೂರು ಕೆರೆಗೆ ನೀರು ಹರಿಸುತ್ತೇವೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ಶಿರಾ ಜನರು ಇನ್ನೆಂದು ಕುಡಿಯುವ ನೀರಿಗೆ ಪರದಾಡುವಂತೆ ಆಗಬಾರದು ಎಂದೆಲ್ಲಾ ಭರವಸೆಗಳ ಮಹಾಪೂರವನ್ನೇ ಹರಿಸಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರದೆ ಅದೇ ಸರ್ಕಾರದ ಸಚಿವರೊಬ್ಬರು ರೈತರನ್ನು ಹೀನಾಮಾನ ಬೈದಿರುವುದು ಜಿಲ್ಲೆಯಾದ್ಯಂತ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಇಂಥವರನ್ನು ಮುಂದೆ ಆಯ್ಕೆ ಮಾಡಬಾರದು ಎಂದು ರೈತರು ಹೇಳಿದ್ದಾರೆ.


ಇದನ್ನೂ ಓದಿ: ತಣ್ಣಗಾಗಿಲ್ಲ BJP ಅತೃಪ್ತರ ಬೇಗುದಿ; ಅಮಿತ್‌ ಶಾಗೆ ದೂರು ನೀಡಲು ಸರದಿಯಲ್ಲಿದೆ ದಂಡು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಯಾವ್‌ ನನ್‌ಮಗನಾದ್ರು ಬಂದು ಕೇಳಿದ್ದೀರಾ: ರೈತರ ವಿರುದ್ಧ ನಾಲಿಗೆ ಹರಿಬಿಟ್ಟ ಸಚಿವ ಮಾಧುಸ್ವಾಮಿ

  • January 18, 2021 at 10:52 am
    Permalink

    ಹರಿಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕಾಗಿಲ್ಲ ನಿಮಗೆ ರೈತರ್ನ ಕೇವಲವಾಗಿ ಮಾತಾಡುವ ಹಕ್ಕಿಲ್ಲ ನಿಮ್ಗೆ .,.ಅವರೆನೊ ಕೇಳಿಲ್ಲ ನಿನು ಜವಾಬ್ದಾರಿ ಇರುವಂತಹ ಮನುಷ್ಯ ನೀನಾದ್ರೂ ಆ ಕೆಲಸ ಯಾಕೆ ಮಾಡಿಲ್ಲ..

    Reply

Leave a Reply

Your email address will not be published.

Verified by MonsterInsights