ಗುಜರಾತ್ 15 ಕಾರ್ಮಿಕರ ಮೇಲೆ ಹರಿದ ಟ್ರಕ್ : ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ!
ರಸ್ತೆ ಪಕ್ಕದಲ್ಲಿ ಮಲಗಿದ್ದ 15 ಜನ ಕಾರ್ಮಿಕರ ಮೇಲೆ ಟ್ರಕ್ ವೊಂದು ಹಾದು ಹೋದ ದುರಂತ ಘಟನೆ ಗುಜರಾತ್ನ ಸೂರತ್ ಬಳಿ ನಡೆದಿದೆ.
ಸೂರತ್ನಿಂದ 60 ಕಿ.ಮೀ ದೂರದಲ್ಲಿರುವ ಕೋಸಾಂಬಾ ಗ್ರಾಮದ ಬಳಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಕಿಮ್-ಮಾಂಡ್ವಿ ರಸ್ತೆಯ ಪಕ್ಕದಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಡಂಪರ್ ಟ್ರಕ್ ಹರಿದಿದ್ದು ಸ್ಥಳದಲ್ಲೇ 12 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಕೆಲವು ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾದರೂ ಮೂರು ಜನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ಐದು ಜನರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಾಕ್ಟರ್ ಟ್ರಾಲಿಯಲ್ಲಿ ತುಂಬಿದ ಕಬ್ಬು ನೇತಾಡುತ್ತಿದ್ದರಿಂದ ಟ್ರಕ್ ಚಾಲಕ ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ನಂತರ ಟ್ರಕ್ ರಸ್ತೆಯಿಂದ ಹೊರಟು ಮಲಗಿದ್ದ ಕಾರ್ಮಿಕರ ಮೇಲೆ ಅಪ್ಪಳಿಸಿದೆ. ಟ್ರಕ್ನ ಮುಂಭಾಗ ಸಂಪೂರ್ಣವಾಗಿ ಚೂರುಚೂರಾಗಿದೆ. ಬಲಿಯಾದವರೆಲ್ಲರೂ ರಾಜಸ್ಥಾನದ ಬನ್ಸ್ವಾಡಾದವರು ಎಂದು ಗುರುತಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅವರ ಕಚೇರಿ ಟ್ವೀಟ್ ಮಾಡಿದೆ, “ಸೂರತ್ನಲ್ಲಿ ನಡೆದ ಟ್ರಕ್ ಅಪಘಾತದಿಂದ ಪ್ರಾಣಹಾನಿ ದುರಂತ. ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೇನೆ.” ಸಂತ್ರಸ್ತರ ಕುಟುಂಬಗಳಿಗೆ ತಲಾ 2 ಲಕ್ಷ ಮತ್ತು ಗಾಯಗೊಂಡ ಪ್ರತಿ ಕಾರ್ಮಿಕನಿಗೆ ತಲಾ 50,000 ಪರಿಹಾರವನ್ನು ಪಿಎಂ ಮೋದಿ ಘೋಷಿಸಿದ್ದಾರೆ.
The loss of lives due to a truck accident in Surat is tragic. My thoughts are with the bereaved families. Praying that the injured recover at the earliest: PM @narendramodi
— PMO India (@PMOIndia) January 19, 2021