ಹಾಸನದಲ್ಲಿ ಭೀಕರ ಅಪಘಾತ: ಅಬಕಾರಿ ಅಧಿಕಾರಿ ಸೇರಿ ನಾಲ್ವರ ದಾರುಣ ಸಾವು!

ಮುಂಜಾನೆಯೇ ಅಪಘಾತ ಸಂಭವಿಸಿದ್ದು, ಡ್ಯೂಟಿ ರಿಪೋರ್ಟಿಂಗ್‍ಗಾಗಿ ಹೋಗುತ್ತಿದ್ದ ಅಬಕಾರಿ ಇಲಾಖೆಯ ಅಧಿಕಾರಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಅಬಕಾರಿ ಇಲಾಖೆಯ ಅಧಿಕಾರಿ ಮತ್ತು ಮೂವರು ಐಟಿ ಉದ್ಯೋಗಿಗಳು ತಮ್ಮ ವೃತ್ತಿಯ ರಿಪೋರ್ಟಿಂಗ್‍ಗಾಗಿ ಹೋಗುತ್ತಿದ್ದಮ ಕಾರು, ಚಲಿಸುತ್ತಿದ್ದ ಕಂಟೈನರ್‍ಗೆ ಹಿಂಬದಿಯಿಂದ ಡಿಕ್ಕಿಹೊಡೆದ ಪರಿಣಾಮ ನಾಲ್ವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಭೀಕರ ರಸ್ತೆ ಅಪಘಾತದಲ್ಲಿ ಮಂಜುನಾಥ್, ಚೇತನ್, ವಿಕ್ರಂ, ಅಭಿಷೇಕ್ ಮೃತ ದುರ್ದೈವಿಗಳಾಗಿದ್ದು, ಈ ನಾಲ್ವರೂ ಸ್ನೇಹಿತರಾಗಿದ್ದರು. ಅವರು ಒಂದೇ ಕಾರಿನಲ್ಲಿ ಪ್ರಯಾಣ ಬೆಳಸುವಾಗ ಕಾರು ಮತ್ತು ಕಂಟೈನರ್‌ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಹಾಸನ ಕಡೆಗೆ ನಾಲ್ವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಈ ವೇಳೆ ಚನ್ನರಾಯಪಟ್ಟಣ ಸಮೀಪ ಕಂಟೈನರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ. ಇದರ ಪರಿಣಾಮ ನಾಲ್ವರು ಸ್ನೇಹಿತರು ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights