ತೆರಿಗೆ ವಂಚಕರಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಮಾಸ್ಟರ್ ಪ್ಲಾನ್ ಮೂಲಕ ಐಟಿ ದಾಳಿ….!
ರಾಜ್ಯದ ಮೆಡಿಕಲ್ ಕಾಲೇಜುಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೇಲೆ ಇಂದು ಐಟಿ ದಾಳಿ ನಡೆಸಿದ್ದು ತೆರಿಗೆ ವಂಚಕರನ್ನ ಬೆಚ್ಚಿಬೀಳಿಸಿದೆ.
ಹೌದು.. ದಾಳಿ ವೇಳೆ ಗೌಪತೆ ಕಾಪಾಡುವ ಅಧಿಕಾರಿ ಈ ಬಾರಿ ತುಂಬಾನೇ ಪ್ಲಾನ್ ಮಾಡಿ ದಾಳಿ ಮಾಡಿದ್ದಾರೆ. ಆ ಪ್ಲ್ಯಾನ್ ಹೇಗಿತ್ತು ಅನ್ನೋದನ್ನ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. ಐಟಿ ದಾಳಿಯ ಗುಟ್ಟು ಗೊತ್ತಾಗುತ್ತಿದ್ದಂತೆ ಅದ್ಬುತ ತಂತ್ರಗಳನ್ನು ಹೆಣದಿರುವುದು ಇಂಟ್ರಸ್ಟಿಂಗ್ ವಿಚಾರ. ೀ ಬಾರಿ ಐಟಿ ದಾಳಿಗೂ ಮುನ್ನ ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಅಧಿಕಾರಿಗಳು ಕಾರಿಗೆ ಫುಟ್ ಬಾಲ್ ಸ್ಟಿಕ್ಕರ್ ಅಂಟಿಸಿಕೊಂಡು ಅಖಾಡಕ್ಕೆ ಇಳಿದಿದ್ದಾರೆ.
ದಾಳಿಗೂ ಮುನ್ನ ಅಧಿಕಾರಿಗಳು ನಿನ್ನೆ ಸಂಜೆ 60 ಕಾರುಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಅನುಮಾನ ಬಾರದಂತೆ ಕಾರು ಬಾಡಿಗೆಗೆ ಪಡೆಯಲು ತಾವು ಇಂಟರ್-ಸ್ಟೇಟ್ ಫುಟ್ಬಾಲ್ ಚಾಂಪಿಯನ್ ಶಿಪ್ ಆಡಲು ಕೇರಳಕ್ಕೆ ಹೋಗಬೇಕು ಎಂಬ ಕಾರಣ ನೀಡಿದ್ದರು. ನಂತರ ಕಾರುಗಳ ಮೇಲೆ ಫುಡ್ಬಾಲ್ ಸಿಕ್ಕರ್ ಅಂಟಿಸಿದ್ದ ಸಿಬ್ಬಂದಿ ಇಂದು ಬೆಳಿಗ್ಗೆ ದಾಳಿ ಮಾಡಿದ್ದಾರೆ.
ಹೀಗೆ ಅಧಿಕಾರಿಗಳು ಮಂಗಳೂರು, ಮಂಗಳೂರು, ನೆಲಮಂಗಲ, ತುಮಕೂರು ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ. ಕೊರೊನಾ ಸಂದರ್ಭದಲ್ಲಿ ಭಾರಿ ಅವ್ಯವಹಾರ ನಡೆದಿದೆ ಮತ್ತು ಮೆಡಿಕಲ್ ಕಾಲೇಜ್ ಶುಲ್ಕ ವಿಚಾರದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂಬ ಕಾರಣಕ್ಕೆ ಈ ದಾಳಿ ಮಾಡಲಾಗಿದೆ.