ರಾಹುಲ್ಗಾಂಧಿ ಬಳಿ ಸರ್ಕಾರದ ವಿರುದ್ದ ಮಹಿಳೆ ಆರೋಪ; ನಮ್ಮನ್ನು ಹೊಗಳಿದ್ದಾರೆಂದು ಅನುವಾದಿಸಿದ ಪುದುಚೇರಿ ಸಿಎಂ!
ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಅವರು ಪುದುಚೇರಿಯಲ್ಲಿ ಫೆ.17 ರಂದು ಪ್ರವಾಸ ಕೈಕೊಂಡಿದ್ದರು. ಈ ವೇಳೆ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದ ರಾಹುಲ್ಗಾಂಧಿ ಅವರ ಬಳಿ ಮೀನುಗಾರ ಮಹಿಳೆಯೊಬ್ಬರು ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡು, ಸರ್ಕಾರದ ವಿರುದ್ಧ ಆರೋಪಿಸಿದ್ದರು. ಮಹಿಳೆ ಹೇಳಿದ್ದನ್ನು ರಾಹುಲ್ ಅವರಿಗೆ ಭಾಷಾಂತರಿಸಿ ಹೇಳಿದ ಪುದುಚೇರಿ ಸಿಎಂ, ಮಹಿಳೆ ಸರ್ಕಾರವನ್ನು ಹೊಗಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
“ಕಡಲತೀರದ ನಮ್ಮ ಬದುಕು ಸಂಕಷ್ಟದಲ್ಲಿದೆ. ನಮಗೆ ಯಾರೂ ಸಹಕರಿಸುತ್ತಿಲ್ಲ. ಅವರೇ (ಮುಖ್ಯಮಂತ್ರಿ ನಾರಾಯಣಸಾಮಿ) ಇಲ್ಲಿದ್ದಾರೆ. ಅವರನ್ನೇ ಕೇಳಿ, ಚಂಡಮಾರುತದ ಸಂದರ್ಭದಲ್ಲಿ ಎಂದಾದರೂ ಇಲ್ಲಿಗೆ ಭೇಟಿ ನೀಡಿದ್ದಾರಾ?” ಎಂದು ಮಹಿಳೆ ಆರೋಪಿಸಿದ್ದರು.
ಇದನ್ನು ಅನುವಾದ ಮಾಡಿದ ಸಿಎಂ. “ನಿವಾರ್ ಚಂಡಮಾರುತದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ ನಾನು ಪರಿಹಾರ ನೀಡಿದ್ದೇನೆ. ಅದನ್ನೇ ಆಕೆ ಹೇಳುತ್ತಿದ್ದಾರೆ” ಎಂದು ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾದ ಖಂಡನೆ ವ್ಯಕ್ತವಾಗಿದೆ.
During Rahul Gandhi interaction with fishermen lady says (in TAMIL) CM V Narayanasamy never visited us after Cyclone Nirav
Narayanswamy Translates to Rahul Gandhi : She saying that CM visited us after cyclone and gave relief materials to us. pic.twitter.com/2sw0bEKyjb— Chayan Chatterjee (@Satyanewshi) February 17, 2021
ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂವಾದದಲ್ಲಿ ಮಹಿಳೆಯ ಕಷ್ಟವನ್ನು ತಪ್ಪಾಗಿ ಭಾಷಾಂತರ ಮಾಡಲಾಗಿದೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ದೇಶದ ಚಿತ್ತ ತಮಿಳುನಾಡಿನತ್ತ! ಕುತೂಹಲ ಕೆರಳಿಸಿದೆ ದ್ರಾವಿಡ ನಾಡಿನ ಚುನಾವಣೆ!