ರಮೇಶ್ ಸಿಡಿ ವಿಚಾರ ಗೃಹ ಇಲಾಖೆಯಿಂದ ತನಿಖೆ- ಬಿಎಸ್ ಯಡಿಯೂರಪ್ಪ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ತನಿಖೆಯನ್ನು ಗೃಹ ಇಲಾಖೆಯಿಂದ ಮಾಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಸಿಡಿ ತನಿಖೆ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ‘ನಿನ್ನೆಯಷ್ಟೇ ರಮೇಶ್ ಜಾರಕಿಹೊಳಿ ಸಿಡಿ ತನಿಖೆಗಾಗಿ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದರ ಪ್ರಕಾರ ಗೃಹ ಇಲಾಖೆಯಿಂದಲೇ ತನಿಖೆಯಾಗಲಿದ್ದು ಗೃಹ ಸಚಿವರು ತೀರ್ಮಾನಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಗೃಹ ಇಲಾಖೆಯಿಂದ ಸೂಕ್ತ ತನಿಖೆಯ ಮತ್ತು ಅದರ ವಿವರ ಘೋಷಣೆ ಮಾಡಲಾಗುತ್ತೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಸಿಎಂ ಯಾವಾಗಿನಿಂದ ತನಿಖೆ ಶುರುಮಾಡುತ್ತಾರೆನ್ನುವ ಮಾಹಿತಿ ಸ್ಪಷ್ಟವಾಗಿ ನೀಡಿಲ್ಲ. ಎಲ್ಲಾ ಆಯಾಮಗಳಿಂದ ತನಿಖೆ ಮಾಡುತ್ತಾರೆ ಎಂದಿದ್ದಾರೆ.

ನಿನ್ನೆ ವಕೀಲರ ಜೊತೆ ಮಾತನಾಡಿ ನಂತರ ದೂರು ಕೊಡುತ್ತೇವೆ ಎಂದು ರಮೆಶ್ ಜಾರಕಿಹೊಳಿ ಹೇಳಿದ್ದರು. ಬಾಲಚಂದ್ರ ಜಾರಕಿಹೊಳಿ ಕೂಡ ಇದನ್ನೇ ಹೇಳಿದ್ದರು. ಪ್ರವೈಟ್ ಡಿಡೆಕ್ಟರ್ ನಿಂದ ತನಿಖೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ರಮೇಶ್ ಮನವಿ ಮೇರೆಗೆ ಗೃಹ ಇಲಾಖೆ ತನಿಖೆ ಮಾಡುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights