ರಮೇಶ್ ಸಿಡಿ ಹಿಂದೆ ‘ಮಹಾನಾಯಕ’ : ರಮೇಶ್ ಹೇಳಿಕೆಗೆ ದಿನೇಶ್ ಪ್ರತಿಕ್ರಿಯೆ ಏನು?
ರಮೇಶ್ ಜಾರಕಿಹೊಳಿ ಸಿಡಿ ತನಿಖೆ ವಿಚಾರ ಗಂಭೀರವಾಗಿ ಚರ್ಚೆಯಾಗುತ್ತಿದ್ದು ರಮೇಶ್ ಸಿಡಿ ತನಿಖೆಗೆ ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಇದರ ಹಿಂದೆ ‘ಮಹಾನಾಯಕ’ ಇದ್ದಾನೆ ಎನ್ನುವ ಹೇಳಿಕೆ ಸದ್ಯ ಭಾರೀ ಅನುಮಾನವನ್ನು ಹುಟ್ಟಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ಮತ್ತು ದೂರುದಾರ ದಿನೇಶ್ ಕಲ್ಲಹಳ್ಳಿ, ” ಯಾರು ಮಹಾನಾಯಕ ನನಗೆ ಗೊತ್ತಿಲ್ಲ. ಕಾನೂನಿನ ಮೂಲಕ ಹೋರಾಟ ಮಾಡಲಿ. ನಾನು ಅದಕ್ಕಾಗಿ ಸಿದ್ಧನಿದ್ದೇನೆ. ಯಾವುದೇ ತಪ್ಪು ಮಾಡಿಲ್ಲ ಆದರೂ ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ದೂರುದಾರ ದಿನೇಶ್ ಇಂದು ದೂರು ವಾಪಸ್ ಪಡೆದಿದ್ದು ಬಹಳಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರ ಮಧ್ಯೆ ಸಚಿವ ಎಸ್.ಟಿ ಸೋಮಶೇಖರ್ ಸಿಡಿ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ.
ಎಸ್.ಟಿ ಸೋಮಶೇಖರ್ ಹೇಳಿಕೆಗೆ ಕಾಂಗ್ರೆಸ್ ಸಿಡಿದೆದ್ದಿದ್ದು, ” ಕಳ್ಳ ಮನಸ್ಸು ಹುಳ್ಳುಳ್ಳಗೆ ಯಾಕೆ? ಎಂದು ಟ್ವೀಟ್ ಮಾಡಿದೆ. ಬಾಂಬೆಯಲ್ಲಿ ಇದ್ದಾಗ ನೀವು ಸಿಡಿ ಮಾಡಿದ್ರಾ? ನೀವು ತಪ್ಪು ಮಾಡಿಲ್ಲ ಅಂದ್ರೆ ಕೋರ್ಟ್ ಮೊರೆ ಯಾಕೆ ಹೋದ್ರಿ? ಬಸವನ ಗೌಡ ಯತ್ನಾಳ್ ಗೆ ಕೇಳಿದ್ರೆ ಯಾರು ಏನ್ ಮಾಡಿದ್ರು ಅಂತ ಅವರೇ ಹೇಳುತ್ತಾರೆ. ಬಾಂಬೆ ಹೋಟೆಲ್ ನಲ್ಲಿ ಕ್ವಾರಂಟೈನ್ ಆದಾಗ ನಿಮ್ಮ ಸಿಡಿ ಮಾಡಿದ್ದು ಯಾರು? ಅದಕೆಷ್ಟು ಖರ್ಚಷು ಮಾಡಿದ್ದೀರಿ? ಎಂದು ಟ್ವೀಟ್ ಮೂಲಕ ನಾನಾ ಪ್ರಶ್ನೆಗಳನ್ನು ಹಾಕಿದೆ ಕಾಂಗ್ರೆಸ್.